ಚಾಮರಾಜನಗರ : ಬೇಡರಪುರದಲ್ಲಿ ಬೆಳಕಾದ "ರವಿ"
ಬೆಳಕಿನ ಬೇಸಾಯಕ್ಕೆ ಮುನ್ನುಡಿ ಬರೆದ ರೈತ ಕಾರ್ಯಕರ್ತ
ಚಾಮರಾಜನಗರ ಸಮೀಪ ಇರುವ ಬೇಡರಪುರ ಈಗ ವಿಭಿನ್ನ ಕೃಷಿ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗೆ ಪ್ರೆರೇಪಣೆ ನೀಡಿದೆ. ಗ್ರಾಮದ ರವಿ ಮತ್ತು ಗಿರೀಶ್ ಎಂಬ ಇಬ್ಬರು ಯುವಕರು ಎರಡು ವಿಭಿನ್ನ ಮಾದರಿಯ ತೋಟ ಕಟ್ಟುವ ಮೂಲಕ ನೈಸಗರ್ಿಕ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ. ರೈತಸಂಘದ ಸಕ್ರೀಯ ಕಾರ್ಯಕರ್ತರಾಗಿ ದಶಕಗಳಿಗೂ ಹೆಚ್ಚುಕಾಲ ಪ್ರತಿಭಟನೆ, ಚಳವಳಿ,ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದ ಇಬ್ಬರು ಯುವಕರು ಈಗ ತಮ್ಮ ತೋಟಗಳಲ್ಲಿ ನಿಜವಾದ ಕ್ರಾಂತಿಮಾಡುವ ಮೂಲಕ ಕಾಯಕ ಚಳವಳಿಗೆ ನಾಂದಿಯಾಡಿದ್ದಾರೆ.
ಪ್ರತಿ ಗ್ರಾಮದಲ್ಲೂ ಇಂತಹ ಯುವರೈತರು ತಾವೇ ಮಾದರಿಯಾಗಿ, ಕೃಷಿಯಲ್ಲಿ ಆದಾಯಗಳಿಸಿ ತೋರಿಸುವ ಮೂಲಕ ಹಳ್ಳಿಯ ಜನರ ಬದುಕನ್ನು ಹಸನು ಮಾಡಬೇಕಿದೆ. ಕೃಷಿಯ ಸಬಲೀಕರಣ ನಾಲ್ಕು ಗೋಡೆಗಳ, ಹವಾನಿಯಂತ್ರಿತ ಕೊಠಡಿಗಳಲ್ಲಿ ಸಿನಿಮಾ ನಟರು ಮತ್ತು ವಿಜ್ಞಾನಿಗಳೊಂದಿಗೆ ನಡೆಯುವ ಚಚರ್ೆಗಳಿಂದ ಆಗದು. ಇಂತಹ ಜೀವಂತ ಮಾದರಿಗಳು ಮಾತ್ರ ಕುಸಿದಿರುವ ಕೃಷಿಯನ್ನು ಮೇಲೆತ್ತಬಹುದು. ರವಿಯಂತಹ ರೈತಸಂಘದ ಕಾರ್ಯಕರ್ತರು ಪ್ರತಿಹಳ್ಳಿಯಲ್ಲೂ ಇಂತಹ ಮಾದರಿ ಕಟ್ಟುವ ಮೂಲಕ ಬಂಗಾರದ ಮನುಷ್ಯರಾಗಲಿ ಎಂಬ ಆಶಯ ನಮ್ಮದು.
=======================================================================
ಚಾಮರಾಜನಗರ : "ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೇ ಕೃಷಿ ಮಾಡಲು ಸಾಧ್ಯವೇ...?" ಇದು ಊರ ಹಿರಿಯರ ಪ್ರಶ್ನೆ. ಹೌದು ಖಂಡಿತಾ ಸಾಧ್ಯ. ಯಾವುದೆ ರಾಸಾಯನಿಕ ಬಳಸದೆ ಕೃಷಿ ಮಾಡಿ ಆಥರ್ಿಕ ಸ್ವಾವಲಂಬನೆ ಸಾಧಿಸಿಬಹುದು ಎನ್ನುವುದು ಕಿರಿಯ ತಲೆಮಾರಿನ ವಾದ.
ಕೃಷಿ ಲಾಭದಾಯಕ ಕಸುಬಾಗಿ ಉಳಿದಿಲ್ಲ. ರೈತರಿಗೆ ಸ್ವಾಭಿಮಾನ ಮತ್ತು ಗೌರವತರಬಲ್ಲ ಉದ್ಯೋಗವಾಗಿ ಉಳಿದಿಲ್ಲ ಎನ್ನುವುದು ಎಲ್ಲೆಡೆ ಕೇಳುವ ಮಾತು. ಇಂತಹ ಮಾತುಗಳನ್ನು ಸುಳ್ಳುಮಾಡಿ ರೈತ ಬದುಕಿಗೂ ಒಂದು ಘನತೆ, ಗೌರವ ಇದೆ ಎನ್ನುವುದನ್ನು ತೋರಿಸಲು ಹೊರಟ ಇಬ್ಬರು ಯುವಕರ ಸಾಹಸಗಾಥೆ ಇದು.
ಚಾಮರಾಜನಗರ ಸಮೀಪ ಇರುವ ಪುಟ್ಟ ಗ್ರಾಮ ಬೇಡರಪುರ. ಊರಿನ ಇಬ್ಬರು ಯುವಕರು ಎರಡು ವಿಭಿನ್ನ ಕೃಷಿ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗೆ ಪ್ರೆರೇಪಣೆ ನೀಡಿದ್ದಾರೆ. ಗ್ರಾಮದ ರವಿ ಮತ್ತು ಗಿರೀಶ್ ಎಂಬ ಇಬ್ಬರು ಯುವಕರು ವಿಶಿಷ್ಠ ಮಾದರಿಯ ತೋಟ ಕಟ್ಟುವ ಮೂಲಕ ನೈಸಗರ್ಿಕ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.
ರೈತಸಂಘದ ಸಕ್ರೀಯ ಕಾರ್ಯಕರ್ತರಾಗಿ ದಶಕಗಳಿಗೂ ಹೆಚ್ಚುಕಾಲ ಪ್ರತಿಭಟನೆ, ಚಳವಳಿ,ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದ ಯುವಕರು ಈಗ ತಮ್ಮ ತೋಟಗಳಲ್ಲಿ ನೈಜ ಕ್ರಾಂತಿಮಾಡುವ ಮೂಲಕ ಕಾಯಕ ಚಳವಳಿಗೆ ನಾಂದಿಯಾಡಿದ್ದಾರೆ. ಹೆಗ್ಗವಾಡಿಪುರದ ಇನ್ನೊಬ್ಬ ಒಣಭೂಮಿ ಬೇಸಾಯ ತಜ್ಞ ಶಿವಕುಮಾರ್ ಯುವಕರಿಗೆ ಸಾಥ್ ನೀಡುತ್ತಿದ್ದಾರೆ.
ನಮ್ಮಲ್ಲಿ ಐದಾರು ವರ್ಷದಿಂದ ಭೀಕರವಾದ ಬರ ಇರೋದ್ರಿಂದ ಮೊದಮೊದಲು ನೀರಿಗೆ ತುಂಬಾ ತೊಂದರೆ ಆಯ್ತು. ಈಗ ಕಬಿನಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾದ ಮೇಲೆ ನೀರಿಗೆ ತೊಂದರೆ ಇಲ್ಲ. ಸಾವಿರ ಅಡಿಗೆ ಕುಸಿದಿದ್ದ ಅಂತರ್ಜಲ ಈಗ ನೂರು ಅಡಿಗೆ ಸಿಗುತ್ತಿದೆ. ನಮ್ಮ ಭಾಗದ ಶಿವಗಂಗೆ ಮತ್ತು ಮಾಲಗೆರೆ ಕೆರೆಗಳಿಗೆ ನೀರು ತುಂಬಿದ ಮೇಲೆ ನಮಗೆ ಹೋದ ಜೀವ ಬಂದಂತಾಗಿದೆ ಎನ್ನುತ್ತಾರೆ.
"ಇದು ಎರಡು ಎಕರೆ ವಿಸ್ತೀಣ ಹೋಂದಿರುವ ತಾಕು. ಅರ್ಧ ಎಕರೆಯಲ್ಲಿ ಹಸುಕರುಗಳಿಗೆ ಬೇಕಾದ ಮೇವನ್ನು ಬೆಳೆದುಕೊಂಡಿದ್ದೇವೆ. ಉಳಿದ ಒಂದುವರೆ ಎಕರೆಯಲ್ಲಿ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಸಂಯೋಜನೆ ಮಾಡಿ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದೇನೆ" ಎಂದರು.
ನವಧಾನ್ಯ ಮಾಡಿದ ಮ್ಯಾಜಿಕ್ : ಮೂರು ವರ್ಷದ ಹಿಂದೆ ಇಲ್ಲಿಯೂ ರಾಸಾಯನಿಕ ಗೊಬ್ಬರ ಬಳಸಿಕೊಂಡು ಕಬ್ಬು, ಬಾಳೆ, ತರಕಾರಿ ಬೆಳೆಯಲಾಗುತ್ತಿತ್ತು. 2014 ರಿಂದ ಈಚೆಗೆ ಭೂಮಿಗೆ ಯಾವುದೇ ಸಕರ್ಾರಿ ಗೊಬ್ಬರ ಬಳಕೆಮಾಡಿಲ್ಲ. ನೈಸಗರ್ಿಕ ಕೃಷಿಗೆ ಭೂಮಿಯನ್ನು ಒಳಪಡಿಸುವ ಮುನ್ನಾ ನವಧಾನ್ಯಗಳನ್ನು ಭಿತ್ತಿ, ಅವು ಹೂ ಬಿಡುವ ಹಂತದಲ್ಲಿ ಮತ್ತೆ ಭೂಮಿಗೆ ಸೇರಿಸಲಾಯಿತು. ನಂತರ 2000 ಸಾವಿರ ಟೋಮಟೊ ಗಿಡಗಳನ್ನು ನಾಟಿಮಾಡಿ, ಗಿಡದ ಎರಡೂ ಬದಿಯಲ್ಲಿ ಮೂಲಂಗಿ ಹಾಕಲಾಯಿತು.
ಕಾಯಿ ಕಚ್ಚಿದ ಮೇಲೆ ಟೋಮೊಟೊಗೆ ಒಮ್ಮೆ ತರಗುಮಾರಿ ರೋಗ ಬಂತು. ಆಗ 1:10 ಅನುಪಾತದಲ್ಲಿ ಗಿಡಗಳಿಗೆ ಒಂದು ದಿನ ಹುಳಿಮಜ್ಜಿಗೆ, ಒಂದು ದಿನ ಗೋಮೂತ್ರ ಮತ್ತೊಂದು ದಿನ ಜೀವಾಮೃತ ಸಂಪರಣೆ ಮಾಡಿದೆ. ತರಗುಮಾರಿ ರೋಗ ಕಂಟ್ರೋಲ್ ಆಯ್ತು. ಪ್ರತಿ ಗಿಡಕ್ಕೆ ಆರು ಕೆಜಿಯಂತೆ ಹನ್ನೆರಡು ಟನ್ ಟೋಮಟೊ ಬೆಳೆದೆ. ಜೊತೆಗೆ ಒಂದಷ್ಟು ಮೂಲಂಗಿಯೂ ಬಂತು. ಇದನ್ನು ನೋಡಿ ನಮ್ಮ ಮನೆಯವರಿಗೆ ನನ್ನ ಮೇಲೆ ನಂಬಿಕೆ ಬಂತು. ನಿನ್ನಗೆ ನಾವು ಏನೂ ತೊಂದರೆ ಕೊಡಲ್ಲ. ನೀನು ನಿನಗೆ ಬೇಕಾದ ಪದ್ಧತಿಯಲ್ಲಿ ಎರಡು ಎಕರೆಯಲ್ಲಿ ಕೃಷಿ ಮಾಡು ಎಂದು ಬಿಟ್ಟುಕೊಟ್ಟರು. ಅಲ್ಲಿಂದ ಶುರುವಾದ ನಮ್ಮ ನೈಸಗರ್ಿಕ ಕೃಷಿ ಪಯಣ ಇಲ್ಲಿಯವರೆಗೆ ಬಂದಿದೆ. ಈಗ ನಾವು ಮಾಡಿರುವ ಕೃಷಿ ಪ್ರಯೋಗ ನಮ್ಮೂರಿನ ಜನರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ನಾವೂ ಈ ಮಾದರಿಯಲ್ಲಿ ಕೃಷಿ ಮಾಡಿ ಗೆಲ್ಲಬಹುದು ಎಂಬ ನಂಬಿಕೆ ಮೂಡಿಸಿದೆ.
ಅಷ್ಟೇ ಏಕೆ ಕ್ರಿಮಿನಾಶಕ ಅಂಗಡಿಯವರೇ ಬಂದು ನಾವು ನೇಸಗರ್ಿಕವಾಗಿ ಬೆಳೆದ ತರಕಾರಿಯನ್ನು ಕಂಡು ಅಚ್ಚರಿ ಪಟ್ಟಿದ್ದಾರೆ.ಕ್ರಿಮಿನಾಶಕ ಬಳಸದೆ ತರಕಾರಿ ಬೆಳೆಯಲು ಸಾಧ್ಯವಿಲ್ಲ ಎಂಬ ಊರ ಹಿರಿಯರ ನಂಬಿಕೆಯನ್ನು ನಾವು ಸುಳ್ಳು ಎಂದು ಸಾಬೀತು ಮಾಡಿದ್ದೇವೆ. ನಮ್ಮ ಕೆಲಸ ಸಾರ್ಥಕವಾಗಿದೆ ಎಂದು ಹೇಳಿದರು ರೈತಸಂಘದ ನೈಜ ಕಟ್ಟಾಳು ರವಿ.
ತಾಳಿಕೆ-ಬಾಳಿಕೆ ಬೇಸಾಯ: "ಮೊದಲು ಹೈಬ್ರಿಡ್ ತಳಿಯ ಟೋಮೊಟೊ ಹಾಕಿದ್ದಾಗ ಸ್ವಲ್ಪ ರಿಸ್ಕ್ ಆಯ್ತು.ಈ ಭಾರಿ ತೋಟದಲ್ಲಿ ಇರುವ ಪ್ರತಿ ಗಿಡವನ್ನು ಬೆಂಗಳೂರಿನ ಐಐಹೆಚ್ಆರ್ನಿಂದ ತಂದು ಹಾಕಿದ್ದೇವೆ. ಇವು ಸುಧಾರಿತ ಸಂಕರಣ ತಳಿಗಳಾಗಿರುವುದರಿಂದ ಹೆಚ್ಚು ರಿಸ್ಕ್ ಇಲ್ಲ" ಎನ್ನುವುದು ರವಿ ಅನುಭವದಿಂದ ಕಂಡುಕೊಂಡಿರುವ ಸತ್ಯ.
ಹೊಸದಾಗಿ ತೋಟಕಟ್ಟುವಾಗ ಮತ್ತೆ ನವಧಾನ್ಯ ಭಿತ್ತಲಾಯಿತು. ಮೂರು ಎಣ್ಣೆಕಾಳು, ಮೂರು ದ್ವಿದಳ ಧಾನ್ಯ, ಮೂರು ಏಕದಳ ಧಾನ್ಯ ಮಿಶ್ರಣಮಾಡಿ ಹೂ ಬಿಡುವ ಹಂತದಲ್ಲಿ ಭೂಮಿಗೆ ಸೇರಿಸಲಾಯಿತು. ನಂತರ ಆರು ಅಡಿಗೆ ಒಂದು ಸಾಲು ಹೊಡೆದುಕೊಂಡು ಗಿಡ ಕೂರಿಸುವ ಸಿದ್ಧತೆ ಮಾಡಿಕೊಳ್ಳಲಾಯಿತು.
ಗಿಡದಿಂದ ಗಿಡಕ್ಕೆ ಮತ್ತ ಸಾಲಿನಿಂದ ಸಾಲಿಗೆ 24 ಅಡಿ ಅಂತರದಲ್ಲಿ ಮಾವು ಹಾಕಲಾಗಿದೆ. ಪ್ರತಿ ಆರು ಅಡಿ ಸಾಲಿಗೆ ಒಂದು ಸಾಲಿಗೆ ಟೋಮೊಟೊ. ನಂತರದ ಸಾಲಿಗೆ ಪರಂಗಿ ಜೊತೆಗೆ ಮೆಣಸಿನಕಾಯಿ ಗಿಡ. ನಂತರದ ಸಾಲಿಗೆ 12 ಅಡಿ ಅಂತರದಲ್ಲಿ ಸೀಬೆ, ಜೊತೆಗೆ ಮಾವು. ಮಾವಿನ ಗಿಡದ ಜೊತೆಗೂ ಬದನೆ. ಬದನೆಯಲ್ಲೂ ಎರಡು ತಳಿ.ಒಂದು ಬಿಳಿ ಉದ್ದ ಮತ್ತೊಂದು ಕಪ್ಪು ಉದ್ದ. ನಡುವೆ ನುಗ್ಗೆಯೂ ಇದೆ. ಹೀಗೆ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಸಂಯೋಜನೆ ಮಾಡಿ ಸಮಗ್ರ ತೋಟ ಕಟ್ಟಲಾಗಿದೆ.
ಗಿಡಗಳಿಗೆ ರೋಗ ಲಕ್ಷಣ ಕಾಣಿಸಿಕೊಂಡರೆ, "ಕಾಲು ಕೆಜಿ ಬೆಳ್ಳುಳ್ಳಿ,ಕಾಲು ಕೆಜಿ ಮೆಣಸಿನಕಾಯಿ, ಮೂರು ಕೆಜಿ ಲಕ್ಕಿ,ಬೇವು,ಹೊಂಗೆ ಸೊಪ್ಪನ್ನು ಚೆನ್ನಾಗಿ ಅರೆದು ಕೊಳ್ಳುತ್ತೇನೆ.ಗೋಮೂತ್ರದಲ್ಲಿ ನೆನೆಸಿ ನಾನೇ ಔಷಧ ಸಿದ್ದ ಮಾಡಿಟ್ಟುಕೊಂಡು 1:10 ಪ್ರಮಾಣದಲ್ಲಿ ಸಿಂಪರಣೆ ಮಾಡುತ್ತೇನೆ. ಇದರಿಂದ ರೋಗ ಹತೋಟಿಗೆ ಬಂದಿದೆ. ಈಗ ಚಳಿಗಾಲ ಆಗಿರುವುದರಿಂದ ತರಕಾರಿ ಗಿಡಗಳಿಗೆ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಅದಕ್ಕಾಗಿ ಹುಳಿ ಮಜ್ಜಿಗೆ ಸಿಂಪರಣೆ ಮಾಡುತ್ತೇನೆ. ಪರಿಣಾಮ ಚೆನ್ನಾಗಿದೆ" ಗಿಡಗಳನ್ನು ನೋಡಿದರೆ ನಿಮಗೆ ಇದು ಗೊತ್ತಾಗುತ್ತದೆ ಎಂದು ರವಿ ಕಣ್ಣರಳಿಸುತ್ತಾರೆ.
ಲೆಕ್ಕಚಾರದ ಬದುಕು : ಕೃಷಿ ಲೆಕ್ಕಚಾರಕ್ಕೆ ನಿಲುಕದ ಬದುಕು ಎನ್ನುತ್ತಾರೆ. ಆದರೆ ರವಿಯಂತಹ ಯುವಕರು "ಲೆಕ್ಕವಿಲ್ಲದವನ್ನು ಒಕ್ಕಲೋದ" ಎಂಬ ಗಾದೆಮಾತನ್ನು ನಂಬಿದವರಂತೆ ಕಾಣುತ್ತಾರೆ. ಒಂದು ಎಕರೆಯಲ್ಲಿ ರವಿ ತಾನು ಮಾಡಿರುವ ಕೃಷಿಯಿಂದ ಬರುವ ಕನಿಷ್ಟ ಆದಾಯವನ್ನು ನಿರೀಕ್ಷೆ ಮಾಡಿರುವುದನ್ನು ನೋಡಿದರೆ ಎಂತಹವರಿಗೂ ಆಶ್ಚರ್ಯವಾಗುತ್ತದೆ.
ಎಕರೆಗೆ ಸುಮಾರು ಅರವತ್ತು ಸಾವಿರ ರೂಪಾಯಿ ವೆಚ್ಚಮಾಡಿ ಅದರಿಂದ ಐದುವರೆ ಲಕ್ಷ ರೂಪಾಯಿ ನಿರೀಕ್ಷೆ ಮಾಡಲಾಗಿದೆ. ಟೋಮೋಟೊ ಗಿಡಗಳು ಸಾವಿರ.ಪ್ರತಿ ಗಿಡ ಐದು ಕೆಜಿಯಂತೆ 5000 ಕೆಜಿ. ಕೆಜಿ ಐದು ರೂಪಾಯಿಗೆ ಮಾರಾಟವಾದರೂ 25 ಸಾವಿರ ರೂ.ಆದಾಯ.ಬದನೆ 2000 ಗಿಡ. ಪ್ರತಿ ಗಿಡಕ್ಕೆ 5 ಕೆಜಿಯಂತೆ 10,000 ಕೆಜಿ. ಹಾಗೆಯೇ ಪರಂಗಿ, ಸೀಬೆ,ಬಾಳೆ ಎಲ್ಲವನ್ನು ಕನಿಷ್ಠ ದರದಲ್ಲಿ ಲೆಕ್ಕಹಾಕಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಪ್ರತಿ ಗ್ರಾಮದಲ್ಲೂ ಇಂತಹ ಯುವರೈತರು ತಾವೇ ಮಾದರಿಯಾಗಿ, ಕೃಷಿಯಲ್ಲಿ ಆದಾಯಗಳಿಸಿ ತೋರಿಸುವ ಮೂಲಕ ಹಳ್ಳಿಯ ಜನರ ಬದುಕನ್ನು ಹಸನು ಮಾಡಬೇಕಿದೆ. ಕೃಷಿಯ ಸಬಲೀಕರಣ ನಾಲ್ಕು ಗೋಡೆಗಳ, ಹವಾನಿಯಂತ್ರಿತ ಕೊಠಡಿಗಳಲ್ಲಿ ಸಿನಿಮಾ ನಟರು ಮತ್ತು ವಿಜ್ಞಾನಿಗಳೊಂದಿಗೆ ನಡೆಯುವ ಚಚರ್ೆಗಳಿಂದ ಆಗದು. ಇಂತಹ ಜೀವಂತ ಮಾದರಿಗಳು ಮಾತ್ರ ಕುಸಿದಿರುವ ಕೃಷಿಯನ್ನು ಮೇಲೆತ್ತಬಹುದು. ರವಿಯಂತಹ ರೈತಸಂಘದ ಕಾರ್ಯಕರ್ತರು ಪ್ರತಿಹಳ್ಳಿಯಲ್ಲೂ ಇಂತಹ ಮಾದರಿ ಕಟ್ಟುವ ಮೂಲಕ ಬಂಗಾರದ ಮನುಷ್ಯರಾಗಲಿ ಎಂಬ ಆಶಯ ನಮ್ಮದು. ಹೆಚ್ಚಿನ ಮಾಹಿತಿಗೆ ಆಸಕ್ತರು ರವಿಬೇಡರಪುರ ಅವರನ್ನು 9686772631 ಸಂಪಕರ್ಿಸಬಹುದು.