ಹೊಸ ತಲೆಮಾರಿನ ಕನಸು `ಪನ್ ಪನ್ ಸೆಂಟರ್' ಪ್ರಕೃತಿ ಮಡಿಲಲ್ಲಿ ಜಾನ್ ಜಾನ್ದಾಯ್ ಹೇಳಿದ ಸ್ವಾವಲಂಬಿ ಜೀವನದಪಾಠ

----------------------------------------------------
`ಜೀವನ ಬಲು ಸುಲಭ ; ಮತ್ಯಾಕೆ ಅದನ್ನು ಕಠಿಣಮಾಡಿಕೊಳ್ಳುತೀರಿ ಹುಚ್ಚಪ್ಪಗಳಿರಾ !'. ಹೌದು ಹಾಗಂತ ಕೇಳಿದ್ದು ಪನ್ ಪನ್ ಸೆಂಟರ್ನ ಜಾನ್ ಜಾನ್ದಾಯ್. ಈಶಾನ್ಯ ಥೈಲ್ಯಾಂಡಿನ ಚಾಂಗ್ ಮಾಯಿ ಪ್ರಾಂತ್ಯದಲ್ಲಿರುವ ಮೆಜೋ ಎಂಬ ಪುಟ್ಟಹಳ್ಳಿಯಲ್ಲಿ ಸಹಜ ಕೃಷಿಕರಾಗಿರುವ ಜಾನ್ದಾಯ್ ತಮ್ಮ ಒತ್ತಡ ರಹಿತ,ಸುಸ್ಥಿರ ಬದುಕಿನ ಜೀವನಶೈಲಿಯಿಂದಾಗಿ ಜಗತ್ತಿನ ಗಮನಸೆಳೆದಿದ್ದಾರೆ.
ಪನ್ ಪನ್ ಸೆಂಟರ್ ಎಂಬ ಇಪ್ಪತ್ತು ಎಕರೆ ಪ್ರದೇಶದಲ್ಲಿ ಕೃಷಿ ಪ್ರಯೋಗನಿರತರಾಗಿರುವ ಜಾನ್ದಾಯ್ ತಮ್ಮ ಸರಳ ಒತ್ತಡರಹಿತ ಬದುಕಿನಿಂದಲೇ ಇಷ್ಟವಾಗುತ್ತಾರೆ.
`ಒಂದು ಹುಲ್ಲಿನ ಕ್ರಾಂತಿ' ಯ ಜಪಾನಿನ್ನ ಮಸನೊಬ ಫೊಕಾವಕ ಸಹಜ ಕೃಷಿಗೆ ಹೊಸ ತಿರುವು ನೀಡಿದಂತೆ ಒತ್ತಡ ರಹಿತ ಬದುಕಿಗೆ ಸರಳ ಸೂತ್ರಗಳನ್ನು ಹೇಳುವ ಮೂಲಕ ಸಂಚಲನ ಸೃಷ್ಠಿಸಿರುವ ಜಾನ್ದಾಯ್ ಅತಹದೊಂದು ಜೀವನ ಕ್ರಮದಿಂದಲೇ ಎಲ್ಲರ ಗಮನಸೆಳೆದಿದ್ದಾರೆ. ಮಣ್ಣಿನ ಮನೆಗಳ ನಿಮರ್ಾಣದಲ್ಲೂ ಪರಿಣತರಾಗಿರುವ ಇವರನ್ನು ಪ್ರೀತಿಯಿಂದ ಜೋ ಎಂದೇ ಕರೆಯಲಾಗುತ್ತದೆ.
ಇಂಟರ್ನೆಟ್ ಯುಟ್ಯೂಬ್ಗಳಲ್ಲಿ, ಟೆಡ್ (ಟಿಇಡಿ) ಟಾಕ್ಸ್ನಲ್ಲಿ ಜೋ ಅವರ ವಿಚಾರಧಾರೆಗಳಿಗೆ ಲಕ್ಷಾಂತರ ಮಂದಿ ಮಾರು ಹೋಗಿದ್ದಾರೆ. ಅವರಂತೆ ನಾವೂ ಯಾಕೆ ಒತ್ತಡರಹಿತ ಬದುಕು ಕಟ್ಟಿಕೊಳ್ಳಬಾರದು ಅನಿಸಿ ಸಹಜ ಕೃಷಿಯತ್ತ ಮುಖಮಾಡಿದ್ದಾರೆ. ಹೊಸ ತಲೆಮಾರಿನ ಯುವಕರಂತೂ ಜೋ ಅವರನ್ನು ಒಮ್ಮೆ ಭೇಟಿಮಾಡಿದರೆ ತಮ್ಮ ಜೀವನ ಸಾರ್ಥಕ ಎಂದೇ ಭಾವಿಸುತ್ತಾರೆ. ಅಷ್ಟರ ಮಟ್ಟಿಗೆ ಜೋ ಅವರ ಕೀತರ್ಿ ಹಬ್ಬಿದೆ. ಜೋ ಅವರಿಗೆ ಕೃಷಿ ಎಂದರೆ ಹೊಟ್ಟೆಪಾಡಿನ ವೃತ್ತಿಯಲ್ಲ,ಅದೊಂದು ಸಂಸ್ಕೃತಿ, ಜೀವನ ಧರ್ಮ.ನಿಸರ್ಗ ಧರ್ಮವನ್ನು ಗೌರವಿಸುತ್ತಲೇ ಸಹಜ ಸುಂದರ ಒತ್ತಡರಹಿತ ಬದುಕು ಕಟ್ಟಿಕೊಳ್ಳುವ ಕಾಯಕ.
ಇಂತಹ ಒಬ್ಬ ಅಪರೂಪದ ದಾರ್ಶನಿಕ,ಸಹಜ ಕೃಷಿಕ, ತಂಪಾದ ಮಣ್ಣಿನ ಮನೆಗಳನ್ನು ನಿಮರ್ಿಸುವ ಕಲೆಗಾರನನ್ನು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ `ಪನ್ ಪನ್ ಸೆಂಟರ್' ನಲ್ಲಿ ಭೇಟಿಮಾಡಿ ಇಡಿ ದಿನ ಅವರೊಂದಿಗಿದ್ದು ಅವರ ಜೀವನಾನುಭವಗಳನ್ನು ಕೇಳಿಸಿಕೊಳ್ಳುವ,ಸಂವಾದ ನಡೆಸುವ ಸುವರ್ಣ ಅವಕಾಶವೊಂದು ನನಗೆ ಒದಗಿಬಂದಿತ್ತು.
ವಿದೇಶ ಪ್ರವಾಸಗಳು ಹಲವು ಪಾಠ ಕಲಿಸುತ್ತವೆ.ಅಲ್ಲಿನ ಸಂಸ್ಕೃತಿ,ಆಹಾರ,ಜನರ ವರ್ತನೆ,ಬದುಕುವ ಕಲೆ ಪ್ರತಿಯೊಂದು ಅಚ್ಚರಿ !.ಈ ಬಾರಿ ಹನ್ನೆರಡು ಮಂದಿ ರೈತ ತಂಡದೊಂದಿಗೆ ನಾನು ಹೋಗಿ ಬಂದದ್ದು `ಪ್ಯಾರಡೈಸ್ ಆಫ್ ಅಥರ್್ ' ಎಂದೇ ಕರೆಯುವ ಥೈಲ್ಯಾಂಡ್ ದೇಶಕ್ಕೆ. ಹತ್ತು ದಿನಗಳ ಈ ಅರ್ಥಪೂರ್ಣ ಪ್ರವಾಸಕ್ಕೆ ಕಾರಣವಾದವರು `ಸಹಜ ಸಮೃದ್ಧ' ಸಾವಯವ ಕೃಷಿ ಬಳಗದ ಕೃಷ್ಣಪ್ರಸಾದ್ ಮತ್ತು ಗ್ರೀನ್ ನೆಟ್ ಆಗ್ಯರ್ಾನಿಕ್ ಸೆಂಟರ್ನ ಮೈಕೆಲ್.ನಮ್ಮವರೇ ಆದ ಬೆಳವಲ ಫೌಂಡೇಷನ್ ಸಂಸ್ಥಾಪಕ ರಾಮಕೃಷ್ಣಪ್ಪ.
ಥೈಲ್ಯಾಂಡ್ಗೆ ಹೋಗುತ್ತಿದ್ದೇನೆ ಎಂದಾಗ ಗೆಳೆಯರು ನಕ್ಕರು. ಥೈಲ್ಯಾಂಡ್ ಎಂದರೆ ಥೈ, ಮಸಾಜ್, ರಿಲ್ಯಾಕ್ಸ್ ಎಂಬ ಗೂಡಾರ್ಥಗಳು ಅವರ ಕಿರುನಗೆಯಲ್ಲಿ ಬೆರತಿದ್ದವು. ಸಹಜ ಸಮೃದ್ಧ ಬಳಗದ ಜೊತೆ ಕೃಷಿ ಅಧ್ಯಯನ ಪ್ರವಾಸ ಹೋಗುತ್ತಿರುವುದರಿಂದ ಅದೆಲ್ಲಕ್ಕಿಂತ ಭಿನ್ನವಾದ ಬದುಕನ್ನು ನೋಡುವ ಅವಕಾಶ ಸಿಗುವುದು ಗ್ಯಾರಂಟಿ ಎಂಬ ನಂಬಿಕೆಯಂತೂ ನನಗಿತ್ತು. ನನ್ನ ನಂಬಿಕೆ ಸುಳ್ಳಾಗಲಿಲ್ಲ. ವಿದೇಶಕ್ಕೆ ಹೋದವರಿಗೆ ಹಳ್ಳಿಗಳಿಗೆ ಹೋಗುವ ಭಾಗ್ಯ ಎಷ್ಟು ಜನರಿಗೆ ಸಿಗುತ್ತದೊ ಗೊತ್ತಿಲ್ಲ. ಎಲ್ಲಾ ಮುಂದುವರಿದ ದೇಶಗಳಲ್ಲೂ ಅದೇ ಗಗನಚುಂಬಿ ಕಟ್ಟಡಗಳು, ವಿಶಾಲವಾದ ರಸ್ತೆಗಳು, ಗ್ಲಾಸ್ ಹೌಸ್ಗಳು, ಕಣ್ಣಿಗೆ ಮುದನೀರುವ ರಮ್ಯ ಮನೋಹರ ಚಿತ್ರಣ. ಇದಕ್ಕಿಂತ ಭಿನ್ನವಾಗಿ ಆ ದೇಶದ ಹಳ್ಳಿಗಳ ರೈತರ ಮನೆಗಳಲ್ಲಿ ಉಳಿದುಕೊಂಡು ಅವರ ಬದುಕನ್ನು ಹತ್ತಿರದಿಂದ ನೋಡುವ ಅವರೊಂದಿಗೆ ಮಾತನಾಡುವ ಅನುಭವವೆ ಬೇರೆ. ಕೃಷಿ ,ಬೀಜ ಸಂರಕ್ಷಣೆ,ಮಾರುಕಟ್ಟೆ,ಭೂ ಒಡೆತನ,ಕೌಟಂಬಿಕ ಸಂಬಂಧ ಈ ಎಲ್ಲದ್ದರ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರಕಿತು.
ಕಾಂಬೋಡಿಯಾ ಮತ್ತು ಬಮರ್ಾ ದೇಶಕ್ಕೆ ಸನಿಹದಲ್ಲೇ ಇರುವ ಥೈಲ್ಯಾಂಡ್ ಭಾರತ ದೇಶದ ಸಿಕ್ಕಿಂಗೂ ತುಸು ದೂರದಲ್ಲೇ ಇದೆ. ಮಲೆನಾಡು,ಅರೆಮಲೆನಾಡು,ಒಣಭೂಮಿಗೆ ಸೇರಿದ ಮೂರು ರೀತಿಯ ಹವಾಮಾನವಿರುವ ಪ್ರದೇಶಗಳಿಂದ ಕೂಡಿದೆ.ಒಂದು ಭಾಗದಲ್ಲಿ ಅಕ್ಕಿ,ಬತ್ತ,ಕಬ್ಬು ಬೆಳೆದರೆ ಮತ್ತೊಂದು ಭಾಗದಲ್ಲಿ ತೋಟಗಾರಿಕೆ,ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಚನ್ನೈನಂತೆ ಹವಾಮಾನ ಹೊಂದಿರುವ ಚಾಂಗ್ ಮಾಯಿಯಲ್ಲಿ ಆಗಾಗ ದಿಢೀರ್ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳ್ಳುವುದು ಉಂಟು.

ಥೈಲ್ಯಾಂಡ್ನ ಸಾವಯವ ರೈತ ಮಾರುಕಟ್ಟೆಗಳು,ಮೌಲ್ಯವರ್ಧನೆ,ಸುಸ್ಥಿರ ವಾಹಿವಾಟನ್ನು ಕುರಿತು ಅಧ್ಯಯನಮಾಡಲು ಹತ್ತು ದಿನಗಳ ಕಾಲ ನಾವು ಚಾಂಗ್ಮಾಯಿ,ಬ್ಯಾಂಕಾಕ್,ಪಟ್ಟಾಯ ಮತ್ತು ಮೆಜೋ, ಮೇಥಾ ಎಂಬ ಹಳ್ಳಿಗಳಲ್ಲಿ ರೈತರ ತಾಕುಗಳು,ಮಾರುಕಟ್ಟೆಗಳಲ್ಲಿ ಸುತ್ತಾಡಿ ಕಲಿತ ಪಾಠಗಳು ಹಲವು.
ಅಲ್ಲಿನ ರೈತರ ಮನೆಗಳಲ್ಲಿ ಉಳಿದುಕೊಂಡಿದ್ದು,ಅವರ ತೋಟಗಳಲ್ಲಿ ಸುತ್ತಾಡಿದ್ದು,ಸಾವಯವ ಕೃಷಿಯ ಬಗ್ಗೆ ಅವರ ಬದ್ಧತೆ,ದೇಸಿ ಬೀಜ ಸಂರಕ್ಷಣೆಯಲ್ಲಿ ಅವರ ಕಾಳಜಿ,ಜೀವನದ ಬಗ್ಗೆ ಅವರ ಧೋರಣೆ ಪ್ರತಿಯೊಂದು ಮಹಾತ್ಮ ಗಾಂಧಿ ಪ್ರಣೀತ ಅರ್ಥಶಾಸ್ತ್ರದಿಂದ ಪ್ರೇರಣೆ ಪಡೆದಂತೆ ಇವೆ.ಸರಳತೆಯಲ್ಲಿ ಸೌಂದರ್ಯ ಕಂಡುಕೊಂಡ ಅವರ ಜೀವನ ದೃಷ್ಠಿ ನೋಡಿ ಗಾಂಧಿ ನಾಡಿನಲ್ಲಿ ಹುಟ್ಟಿದ ನಾವೇ ಕ್ಷಣನಾಚುವಂತಾಯಿತು.
ಮೇಥಾ ಎಂಬ ಸಾವಯವ ಗ್ರಾಮದಲ್ಲಿ ಭೇಟಿಯಾದ ಮಥನಾ ಎಂಬ ಹೆಣ್ಣುಮಗಳು ದೇಸಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡ ಪರಿ, ಅವರ ಕುಟುಂಬ ಸಮಗ್ರ ಕೃಷಿಯಲ್ಲಿ ಕಂಡುಕೊಂಡ ನೆಮ್ಮದಿ, ರೈತ ಸಮುದಾಯ ಒಗ್ಗಟ್ಟಾಗಿ ದುಡಿದರೆ ಹೇಗೆ ಆಥರ್ಿಕವಾಗಿ ಸಬಲರಾಗಬಹುದು ಎನ್ನುವುದಕ್ಕೆ ಸಾಕ್ಷಿಯಾದ `ಮೇಥಾ ಕೆಫೆ' ರೆಸ್ಟೋರೆಂಟ್, ಬ್ಯಾಂಕಾಕ್ನಲ್ಲಿ ದುಡಿದು ಸಾಕಷ್ಟು ಹಣಗಳಿಸಿದರೂ ನೆಮ್ಮದಿ ಕಾಣದೆ ಮೆಜೋ ಹಳ್ಳಿಗೆ ಬಂದು `ಅಥರ್್ ಹೋಂ' ಎಂಬ ಚೆಂದದ ರೆಸಾಟರ್್ ಕಟ್ಟಿಕೊಂಡು ಪ್ರಕೃತಿಯ ಜೊತೆ ಒಂದಾಗಿ ಫಮರ್ಾಕಲ್ಚರ್ ಪಾಠ ಕಲಿಸುವ ತೊಂಗಾಬಾಯ್ ಎಂಬ ಹೆಣ್ಣುಮಗಳ ಹಸಿರು ಪ್ರೀತಿ ಇವೆಲ್ಲ ಹೊಸ ಆಲೋಚನೆಗಳಿಗೆ ಕಾರಣವಾದವು.
ಕಳೆದ ಒಂದು ವರ್ಷದಿಂದ ಕೃಷಿಯ ವಿಭಿನ್ನ ಸಾಧ್ಯತೆಗಳನ್ನು ಹುಡುಕಿಕೊಂಡು ಅಲೆಯುತ್ತಿರುವ ನನಗೆ ಜಾನ್ ಜಾನ್ದಾಯ್ ಅವರನ್ನು ಭೇಟಿಮಾಡಿ ಅವರ ಮಾತುಗಳನ್ನು ಕೇಳಿಸಿಕೊಂಡಾಗ `ಕೃಷಿಗಿಂತ ಶ್ರೇಷ್ಠವಾದ ವೃತ್ತಿ ಬೇರೊಂದಿಲ್ಲ.ಸ್ವಾವಲಂಬನೆ,ಸ್ವಾತಂತ್ರ,ಆರೋಗ್ಯ,ನೆಮ್ಮದಿಯ ಕನಸು ಕಾಣುವವರಿಗೆ, ಸೃಜನಶೀಲತೆಗೆ ಸಾಣಿಹಿಡಿಯಲು ಬಯಸುವವರಿಗೆ ಕೃಷಿ ಬಿಟ್ಟರೆ ಬೇರೆ ಯಾವ ವೃತ್ತಿಯಿಂದಲ್ಲೂ ಸಾಧ್ಯವಿಲ್ಲ' ಎನಿಸಿತು.
ಪನ್ ಪನ್ ಸೆಂಟರ್ : ಉಣಲು ವಿಷಮುಕ್ತ ಆಹಾರ,ವಾಸಕ್ಕೆ ತಂಪಾದ ಮಣ್ಣಿನ ಮನೆ,ಸುತ್ತಲ್ಲೂ ಹಸಿರು ತುಂಬಿದ ಮರಗಿಡಗಳು,ತೋಟದ ಸಣ್ಣ ಸಣ್ಣ ತಾಕುಗಳಲ್ಲಿ ಅಡುಗೆ ಮನೆಗೆ ಬೇಕಾದ ಸಾವಯವದಲ್ಲಿ ಬೆಳೆದ ವಿವಿಧ ಬಗೆಯ ಸೊಪ್ಪು ತರಕಾರಿಗಳು.ದಿನದಲ್ಲಿ ಒಂದೆರಡು ಗಂಟೆ ಮಾತ್ರ ಕೃಷಿ ಕೆಲಸಕ್ಕೆ ಮೀಸಲು.ಉಳಿದ ಸಮಯದಲ್ಲಿ ದೇಸಿ ಬೀಜೋತ್ಪೋದಾನೆ,ಸಂಗೀತ ಆಸ್ವಾದನೆ,ಪುಸ್ತಕ ಓದು,ಕರಕುಶಲ ಕೆಲಸ,ಫೋಟೊಗ್ರಫಿ... ಹೀಗೆ ತಮಗಿಷ್ಟವಾದ ಸೃಜನಶೀಲ ಚಟುವಟಿಕೆಗಳಲ್ಲಿ ನಿರತವಾಗಿರುವ ಜನ. ಒಟ್ಟಿನಲ್ಲಿ ಅವರದು ಒತ್ತಡ ರಹಿತ,ಸ್ವಾವಲಂಬನೆಯ ಸ್ವಾತಂತ್ರ ಬದುಕು. ಇಂತಹ ಸುಂದರ ಬದುಕು ಯಾರಿಗೆ ತಾನೇ ಬೇಡ ಹೇಳಿ. ಇಂತಹ ಬದಕನ್ನು ತಮ್ಮದಾಗಿಸಿಕೊಳ್ಳಲು ಎಲ್ಲರಿಗೂ ಆಸೆ ಇರುತ್ತದೆ.
ಭಾರತ ಸೇರಿದಂತೆ ಅಮೇರಿಕಾ,ಜಪಾನ್,ಚೀನಾ,ರಷ್ಯಾ ಮುಂತಾದ ದೇಶಗಳ ಹೊಸ ತಲೆಮಾರಿನ ಯುವಕರು ಇಂತಹ ಒತ್ತಡರಹಿತ ಸುಂದರ ಬದುಕಿನ ಕನಸು ಹೊತ್ತು ಕೃಷಿಯತ್ತ ಮುಖಮಾಡುತ್ತಿದ್ದಾರೆ. ಇಂತಹ ಹೊಸ ತಲೆಮಾರಿನ ಯುವಕರ ಆದರ್ಶ,ಸ್ಫೂತರ್ಿ ಜೋ . ತಮ್ಮ ಪತ್ನಿ ಪೆಗ್ಗಿ ರೀಂಟ್ಸ್ ಮತ್ತು ಮಕ್ಕಳೊಂದಿಗೆ ಬೆಟ್ಟಕಣಿವೆಗಳ ನಡುವೆ ಪ್ರಕೃತಿಯ ಮಡಿಲಲ್ಲಿ ಸಾವಯವ ಕೃಷಿ,ಮಣ್ಣಿನ ಮನೆಗಳ ನಿಮರ್ಾಣ,ದೇಸಿ ಬೀಜೋತ್ಪಾದನೆ ಸೇರಿದಂತೆ ಹಲವು ಸದಭಿರುಚಿಯ ಸೃಜನಶೀಲ ಚಟುವಟಿಕೆಗಳಲ್ಲಿ ಪನ್ ಪನ್ ಸೆಂಟರ್ ಎಂಬ ಕೃಷಿ ಪ್ರಯೋಗಶಾಲೆಯಲ್ಲಿದ್ದಾರೆ.

ಭ್ರಮೆಯ ಬೆನ್ನೇರಿ : ಮೂಲತಃ ಕೃಷಿ ಕುಟುಂಬದಿಂದಲೇ ಬಂದ ಜೋ ಬಾಲ್ಯದಲ್ಲಿ ಸಂತೋಷವಾಗಿಯೇ ಇದ್ದರೂ,ಹಿರಿಯರು ಮನೆಗೆ ಬೇಕಾದ ವೈವಿಧ್ಯಮಯ ಆಹಾರವನ್ನು ಬೆಳೆಯುತ್ತಿದ್ದರು.ಬೀಜ,ಗೊಬ್ಬರದಲ್ಲಿ ಸ್ವಾವಲಂಭಿಗಳಾಗಿದ್ದರು. ಹಳ್ಳಿಗಳಿಗೆ ಟಿವಿಗಳು ಬಂದ ಮೇಲೆ "ರೈತರನ್ನು ನೀನು ಬಡವ.ನಿನ್ನ ಬಳಿ ಆಸೆಗಳನ್ನು ಪೂರೈಸಿಕೊಳ್ಳುವಷ್ಟು ಹಣ ಇಲ್ಲ.ನಗರಗಳಿಗೆ ಹೋಗಿ ದುಡಿದು ಹಣ ಸಂಪಾದಿಸಿ ಶ್ರೀಮಂತನಾಗು. ಆಸೆಗಳನ್ನು ತೀರಿಸಿಕೊ' ಎಂದು ಹೇಳತೊಡಗಿದವು.

1997 ರಲ್ಲಿ ಕೃಷಿಕನಾಗಲು ನಿರ್ಧರಿಸಿ ಮೆಜೋಹಳ್ಳಿಗೆ ಜೋ ಕಾಲಿಟ್ಟಾಗ ಅದೊಂದು ಮರಗಿಡಗಳಿಲ್ಲದ ಬೆಂಗಾಡು ಪ್ರದೇಶ. "ಸಮಾಜ ಹೇಳಿದಂತೆ ನಾನು ಕೇಳಬೇಕಿಲ್ಲ. ನನ್ನ ಇಚ್ಛೆ ಬಂದಂತೆ ಬದುಕುವ ಸ್ವಾತಂತ್ರ ನನಗಿದೆ. ಯಾವುದು ಬೇಕು,ಯಾವುದು ಬೇಡ ಎನ್ನುವ ಆಯ್ಕೆಯ ಸ್ವಾತಂತ್ರ್ಯ ನನ್ನದೇ ಆಗಿರಬೇಕು" ಎಂಬ ನಿಧರ್ಾರದೊಂದಿಗೆ ಹಳ್ಳಿಗೆ ಮರಳಿದ ಜೋ ಕೃಷಿ ಆರಂಭಿಸಿದಾಗ ಅಲ್ಲಿನ ಜನ ಅವರನ್ನು ಅರೆಹುಚ್ಚ ಎಂದರು. ಮೊದಲ ದಿನ ತಮ್ಮ ಕನಸಿನ ಜಮೀನಿನಲ್ಲಿ ಒಬ್ಬರೇ ಇಡೀ ರಾತ್ರಿ ಕಳೆದರು. ಎರಡನೇ ದಿನ ಆಕರ್ಿಟ್ಯಕ್ಟ್ ಒಬ್ಬ ಆರು ತಿಂಗಳು ನಿನ್ನ ಜೊತೆ ನಾನೂ ಕೆಲಸಮಾಡುತ್ತೇನೆ ಎಂದು ಜೊತೆಯಾದ.ತಮಾಶೆ ಎಂದರೆ ಹಾಗೆ ಆರು ತಿಂಗಳು ಇರಲು ಬಂದ ಆಕರ್ಿಟೆಕ್ಟ್ ಇಂದಿಗೂ ಜೋ ಅವರೊಂದಿಗೆ ಪನ್ ಪನ್ ಸೆಂಟರ್ನ ಒಬ್ಬ ಸದಸ್ಯನಾಗಿ ಇದ್ದಾನೆ.ಈಗ ಅಲ್ಲಿ 60 ಕುಟುಂಬಗಳು ಸಹಕಾರಿ ತತ್ವದಡಿ ಸಮುದಾಯ ಆಧರಿತ ಕೃಷಿ ಮಾಡುತ್ತಾ ಆನಂದವಾಗಿದ್ದಾರೆ. ಅರವತ್ತು ಕುಟುಂಬಗಖಿಗೂ ಒಂದೇ ಅಡುಗೆ ಮನೆ. ಸರ್ವರಿಗೂ ಸಮಬಾಳು,ಸಮಪಾಲು. ಪ್ರತಿನಿತ್ಯ ಒಂದೆರಡು ಗಂಟೆಗಳ ಕಾಲ ಕೃಷಿ ಕೆಲಸಮಾಡುವ ಅವರು ವಿರಾಮ ಕಾಲವನ್ನು ತಮ್ಮಿಚ್ಛೆಯಂತೆ ಕಳೆಯುತ್ತಾರೆ.
ಸಹಜ ಕೃಷಿ, ದೇಸಿ ಬೀಜೋತ್ಪಾದನೆ,ಮಣ್ಣಿನ ಮನೆಗಳ ನಿಮರ್ಾಣ ಕಲೆ ಕಲಿಸುವ ತರಬೇತಿ ಶಿಬಿರಗಳು 2002 ರಿಂದ ನಡೆಯುತ್ತಿದ್ದು 2003 ರಲ್ಲಿ ಪನ್ ಪನ್ ಸೆಂಟರ್ ಆರಂಭಿಸಲಾಗಿದೆ. ತಿಂಗಳಿಗೆ ಪನ್ ಪನ್ ಸೆಂಟರ್ನಲ್ಲಿ ಎರಡು ತರಬೇತಿ ಶಿಬಿರಗಳು ನಡೆಯುತ್ತವೆ.ಕನಿಷ್ಠ 60 ಮಂದಿ ಭಾಗವಹಿಸಿ ಸುಸ್ಥಿರ ಸ್ವಾವಲಂಬನೆಯ ಖುಷಿಯ ಕೃಷಿ ಸಂಸ್ಕೃತಿ ಕಲಿಯುತ್ತಾರೆ.

ಇಲ್ಲಿನ ರೈತರು ಮೊದಲು ತಮಗೆ ಬೇಕಾದ ವಿಷಮುಕ್ತ ಆಹಾರವನ್ನು ಬೆಳೆದುಕೊಳ್ಳಲು,ದೇಸಿ ಬೀಜೋತ್ಪಾದನೆ ಮಾಡಲು ಆದ್ಯತೆ ನೀಡುತ್ತಾರೆ. ಹೆಚ್ಚಾದ ಉತ್ಪನ್ನವನ್ನು ಮಾರುಕಟ್ಟೆಗೆ ಕಳಿಸುತ್ತಾರೆ. ಇರುವ ಭೂಮಿಯನ್ನು ವಿಭಾಗಮಡಿಕೊಂಡು ವಾಷರ್ಿಕವಾಗಿ ಹಣ ತರುವ ತೋಟಗಾರಿಕಾ ಹಣ್ಣಿನ ಬೆಳೆಗಳನ್ನು ಬೆಳೆಯಲು,ಅರಣ್ಯಧಾರಿತ ಬೇಸಾಯ ಮಾಡಲು ಮೀಸಲಿಟ್ಟರೆ ಕಡಿಮೆ ಪ್ರದೇಶದಲ್ಲಿ ವೈವಿಧ್ಯಮಯ ವಿವಿಧ ತರಕಾರಿ ಬೆಳೆದು ಪ್ರತಿವಾರ ಆದಾಯ ಬರುವಂತೆ ಬೆಳೆ ಪದ್ಧತಿ ರೂಢಿಸಿಕೊಂಡಿದ್ದಾರೆ.
ಪನ್ ಪನ್ ಸೆಂಟರ್ನಲ್ಲಿ ನಡೆಯುವ ತರಬೇತಿ ಶಿಬಿರಗಳಲ್ಲಿ ರೈತರಷ್ಟೇ ಅಲ್ಲದೆ ಬ್ಯಾಂಕಾಕ್,ಚಾಂಗ್ಮಾಯಿ ನಗರದ ಶ್ರೀಮಂತ ವರ್ಗದ ಗ್ರಾಹಕರು ಭಾಗವಹಿಸಿ ತಾವು ಸೇವಿಸುವ ಆಹಾರದ ಗುಣಮಟ್ಟದ ಆಹಾರದ ಉತ್ಪಾದನೆ ಬಗ್ಗೆ ತಿಳಿದುಕೊಳ್ಳುತ್ತಾರೆ.ಅವರೂ ಕಂಪನಿಯ ಷೇರುದಾರರಾಗಿದ್ದಾರೆ.

ಮಣ್ಣಿನ ಮನೆಗಳ ನಿಮರ್ಾಣ : ಈಶಾನ್ಯ ಥೈಲ್ಯಾಂಡ್ನಲ್ಲಿ ಮೊದಲ ಬಾರಿಗೆ ಸರಳ,ಸುಲಭ ಮತ್ತು ಕಡಿಮೆ ವೆಚ್ಚದ ಆಕರ್ಷಕ ಮಣ್ಣಿನ ಮನೆಗಳ ನಿಮರ್ಾಣವನ್ನು ಆರಂಭಿಸಿದ ಜೋ ಈಗ ಮಣ್ಣಿನ ಮನೆಗಳ ಬಿಲ್ಡರ್ ಎಂದೇ ಪ್ರಖ್ಯಾತರಾಗಿದ್ದಾರೆ. ಬಿಸಿಲಿನಲ್ಲಿ ತಂಪಾಗಿರುವ,ಚಳಿಗಾಲದಲ್ಲಿ ಬೆಚ್ಚಾಗಿಡುವ ಆಕರ್ಷಕ ಮಣ್ಣಿನ ಮನೆಗಳ ನಿಮರ್ಾಣ ಈಗ ಅಲ್ಲಿ ಜನಪ್ರೀಯವಾಗಿದೆ.
ಅಂದಹಾಗೆ ಜೋ ಇದೇ ಏಪ್ರಿಲ್ ತಿಂಗಳ ಹದಿನೈದನೇ ತಾರೀಖಿನಿಂದ ಮೂರು ದಿನಗಳ ಕಾಲ ಇಲ್ಲಿನ ರೈತರ ಬದುಕು ಮತ್ತು ಕೃಷಿಯ ಬಗ್ಗೆ ತಿಳಿದುಕೊಳ್ಳಲು ಮೈಸೂರಿಗೆ ಬರುವುದಾಗಿ ತಿಳಿಸಿದ್ದಾರೆ. ಜೋ ಬಂದಾಗ ಇಲ್ಲಿನ ರೈತರೊಂದಿಗೆ ಅರ್ಥಪೂರ್ಣವಾದ ಸಂವಾದ ಮತ್ತು ಬೀಜಮೇಳ ನಡೆಸುವ ಬಗ್ಗೆ ಸಹಜ ಸಮೃದ್ಧ ಬಳಗದ ಕೃಷ್ಣಪ್ರಸಾದ್ ಆಲೋಚನೆ ಮಾಡುತ್ತಿದ್ದಾರೆ.
ಜೋ ಅವರ ಜೀವನ ಶೈಲಿಯಿಂದ ಪ್ರೇರಣೆಪಡೆದು ಮೆಜೋ ಹಳ್ಳಿಯಲ್ಲೇ ಎರಡು ಎಕರೆ ಪ್ರದೇಶದಲ್ಲಿ `ಅಥರ್್ಹೋಂ' ಎಂಬ ಪರಿಸರಪೂರಕ ರೆಸಾಟರ್್ ನಿಮರ್ಾಣ ಮಾಡಿರುವ ತೊಂಗಬಾಯ್ ಎಂಬ ಮಹಿಳೆ ಕೂಡ ಅಲ್ಲೀಗ ಹೊಸ ತಲೆಮಾರಿನ `ಐಕಾನ್' ಆಗಿದ್ದಾರೆ.
ಸಂಪೂರ್ಣ ಮಣ್ಣಿನ ಮನೆಗಳಿಂದಲೇ ಕೂಡಿರುವ `ಅಥರ್್ಹೋಂ' ನಲ್ಲಿ ಅತಿಥಿಗಳಿಗೆ ಸಾವಯವ ಕೃಷಿ,ಫಮರ್ಾಕಲ್ವರ್ ಕುರಿತು ಪರಿಚಯಿಸುವ ಉಪನ್ಯಾಸಗಳು,ತರಬೇತಿಗಳು ನಡೆಯುತ್ತವೆ. ಥೈಲ್ಯಾಂಡಿನ ಹೊಸ ತಲೆಮಾರಿನ ಐಟಿಬಿಟಿ ಯುವಕರು,ಯುವತಿಯರು ಹೆಚ್ಚಾಗಿ ಜೋ ಅವರ ಚಿಂತನೆಗಳಿಗೆ ಮಾರುಹೋಗಿ ಮರಳಿ ಹಳ್ಳಿಗೆ ಬಂದು ಕೃಷಿಕರಾಗುತ್ತಿರುವುದು ಆ ದೇಶದಲ್ಲಿ ಸಂಚಲನ ಉಂಟುಮಾಡಿದೆ. ಒತ್ತಡರಹಿತ. ಆರೋಗ್ಯಕರ ಬದುಕಿಗೆ ಕೃಷಿ ಶ್ರೇಷ್ಠ ವೃತ್ತಿ ಎಂಬ ಮನೋಭಾವ ಬೆಳೆಯುತ್ತಿದೆ.ಅದೊಂದು ಚಳವಳಿಯಾಗಿ ರೂಪುಗೊಳ್ಳುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ