ಹಳ್ಳಿಗಳಲ್ಲಿ ಹೊಸ `ಮಾದರಿ' ರೂಪಿಸುತ್ತಿರುವ ದೇಸಿ ಕೃಷಿಕ
# ಕಾಡಂಚಿನ ಗ್ರಾಮಗಳಲ್ಲಿ ನೈಸರ್ಗಿಕ ಕೃಷಿ # ನಾಟಿತಳಿ ಬೀಜಗಳ ಸಂರಕ್ಷಣೆ

ತಾನಿರುವ ಜಾಗದಲ್ಲೆ ನಡೆಯುತ್ತಿರುವ ಚಮತ್ಕಾರಗಳನ್ನು ಕಾಣುವ ಕಣ್ಣು ಮತ್ತು ಸಹಜ ಕುತೂಹಲ ಇದ್ದರೆ ವ್ಯಕ್ತಿಯೊಬ್ಬ ಹೇಗೆ ಪರಿಸರ ಪ್ರೇಮಿಯಾಗಬಲ್ಲ ಎನ್ನುವುದಕ್ಕೆ ಕೆ.ಎನ್.ನಾಗೇಶ್ ಅವರ ಜೀವನಗಾಥೆ ಜ್ವಲಂತ ನಿದರ್ಶನ.
ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಸೋಮಪ್ಪ ಮತ್ತು ಗೌರಮ್ಮನವರ ಮಗನಾದ ನಾಗೇಶ್ ಕಾಡಂಚಿನಲ್ಲಿ ಕುಳಿತುಕೊಂಡು ಕಾಂಟೂರ್ ಬಂಡ್ಡಿಂಗ್,ಪಮರ್ಾಕಲ್ಚರ್,ಸಹಜ ಕೃಷಿಯ ಬಗ್ಗೆ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕುತ್ತಿರುವುದನ್ನು ಗಮನಿಸುತ್ತಿದ್ದ ನನಗೆ ಆ ವ್ಯಕ್ತಿಯನ್ನು ಕಾಣಬೇಕೆಂಬ ಹಂಬಲ ಹೆಚ್ಚಾಗತೊಡಗಿತು.
ಕುತೂಹಲಕ್ಕಾಗಿ ಶೆಟ್ಟಹಳ್ಳಿಯಲ್ಲಿ ನೈಸಗರ್ಿಕ ಕೃಷಿ ಮಾಡುತ್ತಿರುವ ನಾಗೇಶ್ ಅವರನ್ನು ಕಂಡು ಮಾತನಾಡಿಸಲು ಹೋದೆ.ಅವರೊಂದಿಗೆ ಮಾತಿಗೆ ಕುಳಿತರೆ ಕುಸಿಯುತ್ತಿರುವ ಕೃಷಿ, ರಾಜಕೀಯದ ಹುಚ್ಚಿನಿಂದ ಹಳ್ಳಿ ತೊರೆಯುತ್ತಿರುವ ಯುವಕರು,ತಾಲೂಕು ಆಫೀಸ್ ಮುಂದೆ ನಿತ್ಯವೂ ಕಾಣಸಿಗುವ ಜನಜಂಗುಳಿ ಎಲ್ಲದರ ಅಸಹನೆ ಬೇಸರ ಇಣುಕುತ್ತಿತ್ತು. ಸಾಮಾಜಿಕ,ಆಥರ್ಿಕ ಕುಸಿತಕ್ಕೆ ಕಾರಣಗಳು ಸಿಗುತ್ತಾ ಹೋದವು. ಅದೆಲ್ಲಕ್ಕಿಂತ ಮುಖ್ಯವಾಗಿ ತಾನೇಕೆ ನೈಸಗರ್ಿಕ ಕೃಷಿಕನಾದೆ ಎಂದು ಅವರು ಹೇಳಿದ್ದು ಆರೋಗ್ಯದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸಿತು.

ಪಿಯುಸಿವರೆಗೆ ವ್ಯಾಸಂಗ ಮಾಡಿರುವ ನಾಗೇಶ್ ಆರಂಭದಲ್ಲಿ ಎಲ್ಲರಂತೆ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಎಲ್ಲರಂತೆ ಅವರೂ ಸೈಕಲ್ ಹೊಡೆದಿದ್ದಾರೆ.ಫ್ಯಾಕ್ಟರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಮಾಡಿದ್ದಾರೆ.ಕೊನೆಗೆ ಹಳ್ಳಿಗೆ ಮರಳಿ ಕೃಷಿಕರಾಗಿ ನೆಲೆಕಂಡುಕೊಂಡಿದ್ದಾರೆ.ಅದರಲ್ಲಿ ಸಂತೋಷವಾಗಿಯೂ ಇದ್ದಾರೆ.
ಇದಕ್ಕೆಲ್ಲಾ ಕಾರಣವಾಗಿದ್ದು ತಮ್ಮೂರಿನಲ್ಲೇ ತಾವು ಕಂಡ ಒಂದು ನೈಸಗರ್ಿಕ ತೋಟ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.ಸಿವಿಲ್ ಇಂಜಿನಿಯರ್ ಆಗಿರುವ ಮಂಗಲ ಗ್ರಾಮದ ನಾಗೇಂದ್ರ ಅವರಿಗೆ ಕೃಷಿಯಲ್ಲೂ ಆಸಕ್ತಿ.ಹಾಗಾಗಿ ಅವರು ಊರಿನಲ್ಲಿ ನೈಸಗರ್ಿಕ ಕೃಷಿ ಮಾಡುತ್ತಾರೆ.ತಮಗೆ ಬೇಕಾದ ಆಹಾರವನ್ನು ಸಾವಯವ ಪದ್ಧತಿಯಲ್ಲಿ ಬೆಳೆದುಕೊಳ್ಳುತ್ತಾರೆ.ಇದನ್ನು ಕಂಡ ನಾಗೇಶ್ಗೆ ತಾನೂ ಯಾಕೆ ನೈಸಗರ್ಿಕವಾಗಿ ಆಹಾರ ಪದಾರ್ಥಗಳನ್ನು ಬೆಳೆದುಕೊಂಡು ಬಳಸಬಾರದು ಎಂಬ ಪ್ರಶ್ನೆ ಕಾಡುತ್ತದೆ. ತಡಮಾಡದೆ ನಗರದ ಬದುಕಿಗೆ ವಿದಾಯ ಹೇಳಿ ಸಂಪೂರ್ಣವಾಗಿ ಕೃಷಿಕಾಯಕದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸುತ್ತಾರೆ.
ಈಗ ಅವರು ನೈಸಗರ್ಿಕ ಕೃಷಿಯ ಆಳ ಅಗಲ,ಮಣ್ಣು,ನೀರು,ಮರಗಿಡಗಳ ಬಗ್ಗೆ ಸಮರ್ಥವಾಗಿ ಮಾತನಾಡಬಲ್ಲ ದೇಸಿಕೃಷಿ ವಿಜ್ಞಾನಿಯಾಗಿ ರೂಪುಗೊಳ್ಳುತ್ತಿದ್ದಾರೆ.ಕಾಡಂಚಿನ ಗ್ರಾಮವಾದ ಕಾರಣ ಕೃಷಿಯ ಜೊತೆ ಸೋಲಾರ್ ಫೆನ್ಸ್ ಕೆಲಸ ಕೂಡ ಮಾಡಿಕೊಳ್ಳುವುದನ್ನು ಕಲಿತಿರುವ ನಾಗೇಶ್ ಸುತ್ತಮತ್ತಲಿನ ರೈತರಿಗೆ ಪರಿಸರ ಪಾಠ ಹೇಳಿಕೊಡುವ ಹಾದಿಯಲ್ಲಿದ್ದಾರೆ.
ಶೆಟ್ಟಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ನಾಲ್ಕು ಎಕರೆ ಜಮೀನು ಖರೀದಿಸಿ ಅಲ್ಲಿ ಮಳೆಯಾಶ್ರಯದಲ್ಲಿ ಯಾವುದೇ ರಸಾಯನಿಕ,ಕ್ರಿಮಿನಾಶಕವನ್ನೂ ಬಳಸದೆ ಕಡಿಮೆ ವೆಚ್ಚದಲ್ಲಿ ಹಲಸಂದೆ,ಮುಸುಕಿನ ಜೋಳ,ತಿಂಗಳ ಅವರೆ,ಈ ಭಾಗದಲ್ಲಿ ವಿಶೇಷವಾಗಿ ಬೆಳೆಯುವ ಬಟಾಣಿ,ಬೇಳೆಕಾಳು ಎಲ್ಲವನ್ನೂ ಬೆಳೆಯುತ್ತಿದ್ದಾರೆ.ಕಳೆದ ಬಾರಿ ಸೂರ್ಯಕಾಂತಿ ಬೆಳೆದು ಅದರಿಂದ ಅಡುಗೆ ಎಣ್ಣೆಯನ್ನೂ ಮಾಡಿಸಿಕೊಂಡು ತಾವೂ ಬಳಸಿ,ಬೆಂಗಳೂರಿನ ಕೆಲವು ಗೆಳೆಯರಿಗೆ ಮಾರಾಟಮಾಡಿದ್ದಾರೆ.
ವಿಶೇಷವೆಂದರೆ ನಾಗೇಶ್ ಅವರ ಕೃಷಿ ಪ್ರೀತಿಗೆ ಬೆಂಬಲವಾಗಿ ಸಾಫ್ಟ್ವೇರ್ ಉದ್ಯೋಗಿಗಳ ತಂಡವೊಂದು ಆಸರೆಯಾಗಿದೆ.ಬೆಂಗಳೂರು,ಪುಣೆ,ಹೈದರಾಬಾದ್ ಮೂಲದ ಸಮಾನಮನಸ್ಕರ ಗೆಳೆಯರ ತಂಡವೊಂದು ಬಂಡಿಪುರದ ಕಾಡಂಚಿನ ಶೆಟ್ಟಹಳ್ಳಿಯಲ್ಲಿ ನಲವತ್ತು ಎಕರೆ ಪ್ರದೇಶದಲ್ಲಿ ಕಾಡು ಬೆಳೆಸುತ್ತಾ,ಪಮರ್ಾಕಲ್ಚರ್ ಮಾಡಲು ಮುಂದಾಗಿದೆ. ಆ ತಂಡದ ಒರ್ವ ಸಕ್ರೀಯ ಸದಸ್ಯರಾಗಿ ನಾಗೇಶ್ ಗುರುತಿಸಿಕೊಂಡಿದ್ದು ಅವರಿಗೆ ನೈಸಗರ್ಿಕ ಕೃಷಿಯ ಬಗ್ಗೆ ಅರಿವು ಹೆಚ್ಚಾಗಲು,ಕಾಡಿನ ವಿಸ್ಮಯಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗಿದೆ.
ಇದರಿಂದಾಗಿ ನಾಗೇಶ್ಗೆ ಹಲವು ಅನುಕೂಲಗಳಾಗಿವೆ.ಈಗ ಅವರ ಬಳಿ ಎರಡು ವರ್ಷಗಳ ಕಾಲ ನಿರಂತರವಾಗಿ ಫಲಕೊಡುವ ತೊಗರಿ ಇದೆ.ದೇಶದ ನಾನಾ ಭಾಗಗಳಲ್ಲಿ ಉಳಿದುಕೊಂಡಿರುವ ಅಪರೂಪದ ನಾಟಿ ತಳಿಯ ತರಕಾರಿ,ಬೇಳೆಕಾಳುಗಳ ಬೀಜಗಳಿವೆ. ಮುಂದೆ ಈ ಬೀಜಗಳನ್ನು ಹೆಚ್ಚುಮಾಡಿಕೊಂಡು ಈ ಭಾಗದಲ್ಲಿ ಸಹಜ ಕೃಷಿ ಮಾಡುವ ರೈತರಿಗೆ ಕೊಡುವ ಮೂಲಕ ದೇಸಿಬೀಜಗಳನ್ನು ಕಾಪಾಡಿಕೊಳ್ಳಬೇಕು ಎನ್ನುವ ವಿವೇಕ ಇದೆ.ಪ್ರತಿ ಹಳ್ಳಿಯಲ್ಲೂ ದೇಸಿಬೀಜ ಬ್ಯಾಂಕ್ ಮಾಡುವ ಸುಂದರ ಕನಸಿದೆ.

ಅಂತರ್ಜಲ,ಕಾಂಟೂರ್ ಬಂಡ್ಡಿಂಗ್,ಪರ್ಮಾಕಲ್ಚರ್ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು ಎಂದು ಕೇಳಿದರೆ " ಜಕ್ಕಳ್ಳಿಯಲ್ಲಿ ಬೆಂಗಳೂರಿನಿಂದ ಬಂದು ಕೃಷಿಮಾಡುತ್ತಿರುವ ಸಂತೋಷ್,ಪುಣೆಯ ಜೇಡಿ ಆಲ್ಫ್ರೇಡ್ ಮತ್ತು ಗೆಳೆಯರ ಸಹವಾಸ. ಸಂಘದಂತೆ ಸಹವಾಸ ಎನ್ನುವಂತೆ ಇಂತಹ ಅಗತ್ಯವಾಗಿ ಆಗಲೇ ಬೇಕಾಗಿರುವ ಸಂಗತಿಗಳ ಬಗ್ಗೆ ತಿಳಿಯುತ್ತಾ ಹೋಯಿತು" ಎನ್ನುತ್ತಾರೆ ನಾಗೇಶ್.
