ದೇಸಿ ಕೃಷಿ ವಿಜ್ಞಾನಿ ಬಯಲುಸೀಮೆಯ `ಶಕ್ತಿ'ವೇಲು
ದನದ ಕೊಟ್ಟಿಗೆಗೆ ಹೊಂದಿಕೊಂಡಂತೆ ಕಡಿಮೆ ವೆಚ್ಚದಲ್ಲಿ ಜೀವಾಮೃತ ತೊಟ್ಟಿ ನಿಮರ್ಾಣ.ಕೀಟಗಳನ್ನು ನಾಶಮಾಡಲು ಕ್ಯಾಸ್ಟ್ರಾಲ್ ಮಡಕೆ ವಿಧಾನ.ಜಮೀನಿನನ ಬದುಗಳಲ್ಲಿ ಮರಗಳ ಜೋಡಣೆ.ಒಂದು ಎಕರೆಯಲ್ಲಿ ಹತ್ತಾರು ತರಕಾರಿಗಳನ್ನು ಬೆಳೆಯುವ ಬಗೆ.ದೇಹವನ್ನು ಸದಾ ಚೈತನ್ಯವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಕೈತೋಟದಲ್ಲಿ ಬೆಳೆದಿರುವ ಹನ್ನೆರಡು ಬಗೆಯ ತರಕಾರಿಗಳ ಸಂಯೋಜನೆ ಗಮನಸೆಳೆಯುತ್ತವೆ.
ಒಂದು ಚಮಚ ರಾಸಾಯನಿಕವನ್ನು ಸೋಂಕಿಸದೆ,ಹನಿ ಕ್ರಿಮಿನಾಶಕವನ್ನು ಸಿಂಪಡಿಸದೆ ಐದು ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಅರಿಶಿನ,ಹೂಕೋಸು,ಬೀಟ್ರೋಟ್, ಕ್ಯಾರೇಟ್, ಆಲೂಗಡ್ಡೆ ಮತ್ತು ಅರವತ್ತು ಬಗೆಯ ಮರಗಳಿವೆ.
ತಮಿಳುನಾಡಿಗೆ ಸೇರಿರುವ ಕನ್ನಡಿಗರೆ ಹೆಚ್ಚಾಗಿ ವಾಸವಿರುವ ಕಲ್ಲುಬಂಡಿಪುರದ ಬಳಿಯ ಗಣೇಶಪುರ ಎಂಬಲ್ಲಿ ಶಕ್ತಿವೇಲು ಅವರ ಪುಣ್ಯಭೂಮಿ ಇದೆ.ಕೊಂಗಳ್ಳಿಬೆಟ್ಟದ ಕಡೆಯಿಂದ ಹೋದರೆ ಹತ್ತು ಕಿ.ಮೀ.ಅಂತರದಲ್ಲಿರುವ ಇದು ರಾಮರು ವನವಾಸ ಬಂದ ತಪೋಭೂಮಿ.
ಕಾಯಿಲೆ ಕಲಿಸಿದ ಪಾಠ: "ಅದು 1996. ಒಂದೇ ವರ್ಷದಲ್ಲಿ ನನ್ನ ದೇಹದ ತೂಕ ಹತ್ತು ಕೆಜಿಯಷ್ಟು ಹೆಚ್ಚಾಯಿತು. ಜೊತೆಗೆ ಹೊಟ್ಟೆಯೂ ದಪ್ಪವಾಗಿ ಬೆಳೆಯಿತು. ಇದರಿಂದ ಭಯವಾಗಿ ವೈದ್ಯರ ಬಳಿ ಹೋದೆ. ಅವರು ಇದಕ್ಕೆಲ್ಲ ನಿಮ್ಮ ಆಹಾರ ಪದ್ಧತಿಯೆ ಕಾರಣ ಎಂದರು. ರಾಸಾಯನಿಕ ಮತ್ತು ಕ್ರೀಮಿನಾಶಕ ಬಳಸಿ ಬೆಳೆದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದರಿಂದ ನಿಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.ಸಾಧ್ಯವಾದಷ್ಟು ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಎಂದು ಸಲಹೆ ನೀಡಿದರು. ದೇಹದ ಆರೋಗ್ಯ ಕೆಟ್ಟ ಪರಿಣಾಮ ನೈಸಗರ್ಿಕ ಕೃಷಿಮಾಡಿ ನನಗೆ ಬೇಕಾದ ಆಹಾರವನ್ನು ನಾನೇ ಬೆಳೆದುಕೊಳ್ಳುವ ತೀಮರ್ಾನಕ್ಕೆ ಬಂದೆ" ಎನ್ನುತ್ತಾರೆ ಶಕ್ತಿವೇಲು.
ವಿಜ್ಞಾನಿಗಳು,ಕೃಷಿ ವಿಶ್ವ ವಿದ್ಯಾನಿಲಯಗಳು ರೈತರನ್ನು ದಾರಿತಪ್ಪಿಸುತ್ತಿಲ್ಲವೆ ಎಂದು ಕೇಳಿದರೆ " ಮಾರಾಟ ಮಾಡುವವರು ವಿಷಕೊಟ್ಟರೂ ತಿನ್ನಲು ನಾವು ರೆಡಿ ಇರುವಾಗ, ಕೊಡುವವರು ಏನು ಮಾಡುತ್ತಾರೆ. ವಿಷ ಯಾವುದು, ಅಮೃತ ಯಾವುದು ಎನ್ನುವುದು ನಮಗೆ ಗೊತ್ತಿರಬೇಕು. ಪಂಚೇಂದ್ರೀಯಗಳನ್ನು ಎಚ್ಚರವಾಗಿಟ್ಟುಕೊಂಡಿದ್ದರೆ ಯಾರು ನಮ್ಮನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ" ಎನ್ನುತ್ತಾರೆ.
ಜಗತ್ತಿನ ದೈತ್ಯ ಮಾನ್ಸಾಂಟೊ ಕಂಪನಿಯ ಮೂರು ಯುನಿಟ್ಗಳು ಈಗಾಗಲೇ ನೈಸಗರ್ಿಕ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆ.ಹಿಂದೂಸ್ಥಾನ್ ಲೀವರ್ ಕಂಪನಿ ಕೂಡ ನೈಸಗರ್ಿಕ ಕೃಷಿಗೆ ಉತ್ತೇಜನ ನೀಡುತ್ತಿದ್ದು ಇಂದಲ್ಲಾ ನಾಳೆ ಮನುಕುಲ ಉಳಿಯಬೇಕಾದರೆ ಎಲ್ಲರೂ ನೈಸಗರ್ಿಕ ಕೃಷಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ.
ಡಾ.ಎಲ್. ನಾರಾಯಣರೆಡ್ಡಿ,ವಂದನಾಶಿವ, ನಮ್ಮಳ್ವಾರ್,ಸುಭಾಷ್ ಪಾಳೇಕಾರ್ ಸೇರಿದಂತೆ ನೂರಾರು ಸಹಜ ಕೃಷಿಕರನ್ನು ಭೇಟಿಮಾಡಿ ಅನುಭವ ಹಂಚಿಕೊಂಡಿದ್ದಾರೆ.ತೋಟಕ್ಕೆ ಬಂದ ರೈತರಿಗೂ ಸಲಹೆ ನೀಡುತ್ತಾರೆ.
ಆರಂಭದ ಮೂರು ವರ್ಷದಲ್ಲಿ ಇವರು ತೊಂದರೆ ಅನುಭವಿಸಿದ್ದಾರೆ.ಬೆಳೆ ಕೈಕೊಟ್ಟು ನಷ್ಟವಾಗಿದೆ. ಇದಕ್ಕೆಲ್ಲ ತಾನು ಮಾಡಿದ ತಪ್ಪುಗಳು ಕಾರಣವೇ ಹೊರತು ನೈಸಗರ್ಿಕ ಕೃಷಿ ಪದ್ಧತಿಯಲ್ಲ.ಮುಖ್ಯವಾಗಿ ನೈಸಗರ್ಿಕ ಕೃಷಿಯಲ್ಲಿ ಏನು ಮಾಡಬೇಕು ಎನ್ನುವುದಕ್ಕಿಂತ ಯಾವುದನ್ನು ಮಾಡಬಾರದು ಎನ್ನುವುದು ಶಕ್ತಿವೇಲು ಕಂಡುಕೊಂಡ ಸತ್ಯ.
ರೈತರು ಜಮೀನಿನಲ್ಲಿ ಬೆಂಕಿ ಹಾಕಬೇಕಾದದ್ದು ಎರಡೇ ಜಾಗದಲ್ಲಿ. ಒಂದು ಅಡುಗೆ ಮನೆ.ಮತ್ತೊಂದು ಪೂಜಾ ಕೋಣೆ.ಇವೆರಡನ್ನು ಬಿಟ್ಟು ಜಮೀನಿನಲ್ಲಿ ಸಿಗುವ ಕಸಕಡ್ಡಿಗಳನ್ನು ಯಾವುದೇ ಕಾರಣಕ್ಕೂ ಬೆಂಕಿಹಾಕಿ ನಾಶಮಾಡಬಾರದು.ಅದನ್ನು ಗಿಡಮರಗಳನ್ನು ಬೆಳೆಸಲು ಹೊದಿಕೆಯಾಗಿ ಬಳಸಿಕೊಳ್ಳಬೇಕು. ಗಿಡಮರಗಳನ್ನು ಬೆಳೆಸುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು. ಮಳೆಯ ನೀರು ಭೂಮಿಗೆ ಹಿಂಗುವಂತೆಯೂ ಮಾಡಬಹುದು. ಭೂಮಿಗೆ ಹೊದಿಕೆ ಇದ್ದಾಗ ಮಾತ್ರ ಗೆದ್ದಲು ಹುಳುಗಳು ಬರುತ್ತವೆ. ಇದರಿಂದ ಎರೆಹುಳುಗಳು ಭೂಮಿಯ ಆಳದಿಂದ ಮೇಲೆಬಂದು ಮಣ್ಣನ್ನು ಫಲವತ್ತು ಮಾಡುತ್ತವೆ.
ಗೆದ್ದಲು ಹುಳುಗಳು ಹೇಗೆ ಎರೆಹುಳುಗಳ ಸಂಖ್ಯೆ ಹೆಚ್ಚಾಗಲು ನೆರವಾಗುತ್ತವೆ ಎನ್ನುವುದರ ಬಗ್ಗೆ ಹೊಸ ಸಂಶೋಧನೆಯೊಂದನ್ನು ಮಾಡಿದ್ದು ಅದನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದಾರೆ.ಕೀಟ ವಿಜ್ಞಾನಿಗಳು ಬಂದು ತಮ್ಮ ಈ ಹೊಸ ಸಂಶೋಧನೆಯನ್ನು ದೃಢೀಕರಿಸಬೇಕಿದೆ ಎಂದು ಹೇಳುತ್ತಾರೆ.
ಬಯಲು ಸೀಮೆ ಬೆಳೆಶಾಸ್ತ್ರ : ಪ್ರಕೋಲಿ ತಾವರೆಯೊಂದನ್ನು ಬಿಟ್ಟು ಎಲ್ಲಾ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುವ ಶಕ್ತಿವೇಲು,ಈಗ ಜಮೀನಿನಲ್ಲಿ ಕ್ಯಾರೇಟು,ಹೂ ಕೋಸು ಹಾಗೂ ಬಿಟ್ರೋಟ್, ಆಲೂಗಡ್ಡೆ,ಅರಿಶಿನವನ್ನು ಸಮೃದ್ಧವಾಗಿ ಬೆಳೆದಿದ್ದಾರೆ.
"ಹದಿನೈದು ಎಕರೆಯಲ್ಲಿ ಫಸಲು ಮಾಡುವುದು ಒಬ್ಬರಿಗೆ ಕಷ್ಟ.ಅದಕ್ಕಾಗಿ ಐದು ಎಕರೆಯಲ್ಲಿ ಅರಿಶಿನ ಬೆಳೆಯುತ್ತೇನೆ. ಯಾಕೆಂದರೆ ಇಲ್ಲಿ ಕಾಡು ಹತ್ತಿರವಿರುವುದರಿಂದ ಆನೆ ಮತ್ತು ಹಂದಿಗಳ ಕಾಟ ಜಾಸ್ತಿ.ಅರಿಶಿನ ಬೆಳೆದರೆ ಅದಕ್ಕೆ ಅಂತಹ ಸಮಸ್ಯೆ ಇಲ್ಲ.ಅದಕ್ಕಾಗಿ ಅರಿಶಿನ ಮುಖ್ಯ ಬೆಳೆ. ಉಳಿದ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಾರೆ.
ಯಾವುದೇ ಬೆಳೆ ಮಾಡುವ ಮೊದಲು ನವಧಾನ್ಯವನ್ನು ಬಿತ್ತಬೇಕು. 21 ಜಾತಿಯ ಏಕದಳ,ದ್ವಿದಳ,ಎಣ್ಣೆಕಾಳು ಬೀಜಗಳನ್ನು ಎಕರೆಗೆ 30 ಕೆಜಿಯಂತೆ ಬಿತ್ತಬೇಕು. ನಂತರ 60 ದಿನಗಳಾದ ಮೇಲೆ ಅದನ್ನು ಭೂಮಿಗೆ ಸೇರಿಸಿ ನಂತರ ಕೃಷಿ ಮಾಡಬೇಕು ಎನ್ನುತ್ತಾರೆ.
ಭೂಮಿಯನ್ನು ಉಳುಮೆ ಮಾಡುವ ಸಮಯ ಕೂಡ ಬಹಳ ಮುಖ್ಯ. ಬೆಳಗ್ಗೆ 10 ಗಂಟೆ ಮೇಲೆ ಸಂಜೆ 5 ಗಂಟೆಯ ಒಳಗೆ ಭೂಮಿಯ ಉಳುಮೆ ಕೆಲಸ ಮುಗಿದಿರಬೇಕು. ಬಿಸಿಲು ಇದ್ದಾಗ ಉಳುಮೆ ಮಾಡುವುದರ ಲಾಭವೆಂದರೆ ಎರೆಹುಳುಗಳು ಭೂಮಿಯ ಆಳಕ್ಕೆ ಹೋಗಿರುತ್ತವೆ.ಮುಂಜಾನೆ ಮತ್ತು ಕತ್ತಲಿನ ಸಮಯದಲ್ಲಿ ಎರೆಹುಳುಗಳು ಮೇಲೆ ಬರುವುದರಿಂದ ಉಳುಮೆ ಮಾಡುವಾಗ ಟ್ರ್ಯಾಕ್ಟರ್ಗೆ ಸಿಕ್ಕಿ ಸಾಯುತ್ತವೆ. ಭೂಮಿ ತೇವವಾಗಿದ್ದಾಗ ಉಳುಮೆ ಮಾಡಬಾರದು ಎನ್ನುತ್ತಾರೆ.
ಒಂದು ಹಸು ಇದ್ದರೆ ಐದು ಎಕರೆಯಲ್ಲಿ ಕೃಷಿ ಮಾಡಬಹುದು. ಪ್ರತಿದಿನ ಐದು ಲೀಟರ್ ಗಂಜಲ ಸಂಗ್ರಹಣೆ ಮಾಡಿದರೆ ಸಾಕು.ಪ್ರತಿ ಎಕರೆಗೆ ತಿಂಗಳಿಗೆ 30 ಲೀಟರ್ ಗಂಜಲ ಬೇಕಾಗುತ್ತದೆ.ಸಗಣಿ,ಬೆಲ್ಲ,ಗಂಜಲ ಇಷ್ಟೇ ನಾನು ಹಾಕುವುದು.ಇದನ್ನು ನಮ್ಮಲ್ಲಿ ಅಮುದ ದ್ರವಣಂ ಎಂದು ಕರೆಯುತ್ತೇವೆ. ಹೊಸದಾಗಿ ನೈಸಗರ್ಿಕ ಕೃಷಿ ಮಾಡುವವರು ಸುಭಾಷ್ ಪಾಳೇಕಾರ್ ಹೇಳುವಂತೆಯೇ ಜೀವಮೃತ ತಯಾರು ಮಾಡಿಕೊಳ್ಳಬೇಕು.ನಂತರ ಮೂರ್ನಾಲ್ಕು ವರ್ಷ ಕಳೆದರೆ ಬೆಲ್ಲ,ಸಗಣಿ,ಗಂಜಲ ಸಾಕು ಎನ್ನುತ್ತಾರೆ.
ಒಂದು ಅಡಿ ಭೂಮಿ ಅಗೆದಾಗ ಮೂರು ಎರೆಹುಳು ಸಿಕ್ಕಿದರೆ ಅದು ಫಲವತ್ತಾದ ಮಣ್ಣು ಎನ್ನುತ್ತಾರೆ.ಆದರೆ ನನ್ನ ಭೂಮಿಯನ್ನು ಅಗೆದರೆ ಅಡಿಗೆ ಮೂವತ್ತು ಎರೆಹುಳು ಸಿಗುತ್ತವೆ ಎಂದು ಮಣ್ಣನ್ನು ಬಗೆದು ಎರೆಹುಳಗಳ ಲೆಕ್ಕ ತೋರಿಸುತ್ತಾರೆ. ಸಹಜ ಕೃಷಿಯಲ್ಲಿ ಎಕರೆಗೆ 30 ಕ್ವಿಂಟಾಲ್ ಇಳುವರಿ ಅರಿಶಿನ ತೆಗೆಯುತ್ತಾರೆ.
ಒಟ್ಟು ಐದು ಎಕರೆಯಲ್ಲಿ 60 ಜಾತಿಯ ಮರಗಳಿವೆ. ಹುಣಸೆ 20, ಹಲಸು 30, ಕೊಡಂಬುಳಿ (ಕೇರಳದಲ್ಲಿ ಸಿಗುತ್ತದೆ ಹುಣಸೆ ಹಣ್ಣಿನ ಜಾತಿ),ಜಂಬೂನೇರಳೆ ಮತ್ತಿತರ ಮರಗಳಿವೆ.
ಹಿಪ್ಪೆ, ಆಲ,ಬೇವು,ಅರಳಿ,ಹತ್ತಿ ಈ ಐದು ಮರಗಳಿಗೆ ಮಳೆ ಕರೆಯುವ ಶಕ್ತಿ ಹೆಚ್ಚಿರುತ್ತದೆ. ಜಮೀನಿನ ಸುತ್ತಲೂ ಈ ಮರಗಳು ಇದ್ದರೆ ಆ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಹೆಚ್ಚಿರುತ್ತದೆ ಎನ್ನುವುದು ತಮ್ಮ ಅನುಭವಕ್ಕೆ ಬಂದಿದೆ ಎನ್ನುತ್ತಾರೆ.
ವಿಶೇಷ ಬಿಲ್ವ : "ಇದೊಂದು ಅಪರೂಪದ ವಿಶೇಷ ಬಿಲ್ವಪತ್ರೆ ಗಿಡ.ಇದನ್ನು ಮಘಾ ಬಿಲ್ವ ಪತ್ರೆ ಎನ್ನುತ್ತಾರೆ.ಇದರ ಒಂದು ರೆಕ್ಕೆಯನ್ನು ಕಿತ್ತು ನೋಡಿದಾಗ ಅದರ ಎಲೆಗಳು ಶಿವಲಿಂಗಾಕಾರದಲ್ಲಿರುತ್ತವೆ. ದಕ್ಷಿಣ ಭಾರತ ವಿಂಡ್ ಮಿಲ್ ಛೇರ್ಮನ್ ಕಸ್ತೂರಿ ರಂಗನ್ ಇದನ್ನು ನನಗೆ ಗಿಫ್ಟ್ ಆಗಿ ಕೊಟ್ಟರು. ಇಂಟರ್ ನೆಟ್ನಲ್ಲಿ ನನ್ನ ಬಗ್ಗೆ ಓದಿ ಹುಡುಕಿಕೊಂಡು ಬಂದು, ಇದು ನಿಮ್ಮದೆ ಜಮೀನಿನಲ್ಲಿ ಬೆಳೆಯಲು ಸೂಕ್ತ ಎಂದು ಈ ಬಿಲ್ವಪತ್ರೆ ಗಿಡವನ್ನು ಉತ್ತರ ಭಾರತದಿಂದ ತಂದುಕೊಟ್ಟರು ಎಂದು ಸೊಗಸಾಗಿ ಬೆಳೆದ ಗಿಡವನ್ನು ಭಕ್ತಿಯಿಂದ ತೋರಿಸುತ್ತಾರೆ.
ಆರೋಗ್ಯಕ್ಕಾಗಿ ಕೃಷಿ : "ಕೃಷಿಯನ್ನು ವ್ಯವಹಾರಿಕವಾಗಿ ಮಾಡಲು ಮನಸ್ಸು ಒಪ್ಪುತ್ತಿಲ್ಲ.ಇದೊಂದು ಸಂಸ್ಕೃತಿ. ಆರೋಗ್ಯವನ್ನು ಕಾಪಾಡಿಕೊಂಡು ಆಸ್ಪತ್ರೆಯಿಂದ ದೂರವಾಗಿರಲು ಕೃಷಿ ಮಾಡಬೇಕು.ನಮ್ಮ ಕುಟುಂಬದಲ್ಲಿ ಇದುವರೆಗೂ ನಾವ್ಯಾರು ಆಸ್ಪತ್ರೆಗೆ ಹೋಗಿಲ್ಲ. ನಾವು ಉಣ್ಣುವ ಆಹಾರವೇ ನಮ್ಮ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸಮಾಡುತ್ತದೆ. ಅದಕ್ಕಾಗಿ ಈ ಬಾರಿ ಅರ್ಧ ಎಕರೆಯಲ್ಲಿ 12 ಜಾತಿ ತರಕಾರಿಗಳನ್ನು ಬೆಳೆಸುತ್ತಿದ್ದೇನೆ ಎಂದು ತೋರಿಸಿದರು.
ಬೂದುಗುಂಬಳ,ಸೋರೆಕಾಯಿ,ಗೋರಿಕಾಯಿ,ಪಡುವಲಕಾಯಿ,ಕುಂಬಳಕಾಯಿ,ತೊಂಡೆಕಾಯಿ,ನುಗ್ಗೆಕಾಯಿ,ಈರದಕಾಯಿ,ತೆಂಗಿನಕಾಯಿ(ಕೊಬ್ಬರಿ),ನಿಂಬೆ,ಬೆಂಡೆಕಾಯಿ,ಬಾಳೆಕಾಯಿ. ಈ ಹನ್ನೆರಡು ತರಕಾರಿಗಳನ್ನು ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ಯಾವ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.ಇವೆಲ್ಲ ದೇಹವನ್ನು ಬಾಧಿಸುವ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸಮಾಡುತ್ತವೆ.ಈ ಕಾಯಿಗಳನ್ನು ನೈಸಗರ್ಿಕವಾಗಿ ಕೈತೋಟದಲ್ಲಿ ಬೆಳೆದುಕೊಂಡು ಉಪಯೋಗಿಸುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು. ಈ ಹನ್ನೆರಡು ಬಗೆಯ ತರಕಾರಿಗಳು ಈಗ ತಮ್ಮ ಕೈ ತೋಟದಲ್ಲಿ ಇದ್ದು ಅವುಗಳನ್ನು ಬಳಸುತ್ತಿರುವುದರಿಂದ ತನ್ನ ಕುಟುಂಬ ಯಾವ ಕಾಯಿಲೆಗೂ ತುತ್ತಾಗದೆ ಆಸ್ಪತ್ರೆಯಿಂದ ದೂರ ಇದ್ದೇವೆ" ಎನ್ನುತ್ತಾರೆ.
ಕಳೆ,ಪಾಥರ್ೇನಿಯಂನಾಶಕ : ಸಣ್ಣಪುಟ್ಟ ಕಳೆ ಮತ್ತು ಪಾಥರ್ೇನಿಯಂ ನಾಶಕ್ಕೂ ಜೈವಿಕ ಪರಿಹಾರ ಕಂಡುಕೊಂಡಿದ್ದಾರೆ. 10 ಲೀಟರ್ ಹಸುವಿನ ಗಂಜಲಕ್ಕೆ ಒಂದು ಕೆಜಿ ಹರಳೆಕಾಯಿ ಜಜ್ಜಿ ಹತ್ತು ದಿನಗಳ ವರೆಗೆ ನೆರಳಿನಲ್ಲಿ ಇಡಬೇಕು. ನಂತರ ಸೋಸಿಕೊಂಡು ಪ್ರತಿ 8 ಲೀಟರ್ ನೀರಿಗೆ, 2 ಲೀಟರ್ ಈ ದ್ರವಣ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಪಾಥರ್ೇನಿಯಂ,ಗರಿಕೆ ಸೇರಿದಂತೆ ಸಣ್ಣಪಟ್ಟ ಕಳೆಗಳು ನಾಶವಾಗುತ್ತವೆ. ಗಂಜಲ ಹಳೆಯದದಷ್ಟು ಒಳ್ಳೆಯದು.ಬಾಳೆ,ಕಬ್ಬು,ತೋಟಗಾರಿಕೆ ಬೆಳೆಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಎನ್ನುತ್ತಾರೆ.
ಕೀಟ ನಿಯಂತ್ರಣಕ್ಕಡ ಮಡಕೆ ಬಳಕೆ : ಬೆಳೆಗಳಿಗೆ ಬಾಧಿಸುವ ಹುಳುಗಳನ್ನು ನಿಯಂತ್ರಿಸಲು ಮಡಕೆ ಬಳಸುತ್ತಿರುವುದು ಇವರ ಜಾಣ್ಮೆಗೆ ಸಾಕ್ಷಿ. ಚಿಟ್ಟೆಗಳು ಮೊಟ್ಟೆ ಇಟ್ಟು ಹುಳುಮಾಡಿ ಬೆಳೆಗಳಿಗೆ ಹಾನಿ ಉಂಟುಮಾಡುತ್ತವೆ.ಮೊಟ್ಟೆ ಇಡುವ ಮೊದಲು ದುಂಬಿಗಳನ್ನೆ ಹಿಡಿದು ಬಿಟ್ಟರೆ ಸಾಕಷ್ಟು ಹಾನಿ ತಪ್ಪಿಸಬಹುದು.ಅದಕ್ಕಾಗಿ ಸರಳ,ಸುಲಭ ಉಪಾಯ ಇದು.
ಐದು ಲೀಟರ್ ನೀರು ಹಿಡಿಯುವ ಮಡಕೆಯನ್ನು ತೆಗೆದುಕೊಂಡು ನಾಲ್ಕು ಲೀಟರ್ ನೀರು,ಒಂದು ಕೆಜಿ ಹರಳನ್ನು ಕುಟ್ಟಿ ಅದರಲ್ಲಿ ಹಾಕಬೇಕು. ಎಕರೆಗೆ ಐದು ಮಡಕೆ ಬೇಕು. ತೆಂಗಿಗೆ ನುಸಿ ರೋಗ ಕಡಿಮೆಯಾಗುತ್ತದೆ. ಕಬ್ಬು,ಬಾಳೆಯಲ್ಲಿ ಬರುವ ಗೊಣ್ಣೆಹುಳು ನಿಯಂತ್ರಣಕ್ಕೆ ಸಹಕಾರಿ. ಏಪ್ರಿಲ್ನಲ್ಲಿ ಇದನ್ನು ಸಿದ್ಧಮಾಡಿ ಇಟ್ಟರೆ ದುಂಬಿಗಳನ್ನು ಸೆರೆಹಿಡಿದು ನಾಶಮಾಡಬಹುದು.ಮಡಕೆಗೆ ವಾರಕ್ಕೊಂದು ಸಾರಿ ಅರ್ಧಲೀಟರ್ ನೀರು ಹಾಕಿಕೊಳ್ಳಬೇಕು. ಕತ್ತಿನ ಮಟ್ಟಕ್ಕೆ ಮಡಕೆಯನ್ನು ಭೂಮಿಯಲ್ಲಿ ಹೂಳಬೇಕು. ಮೂರು ವರ್ಷದ ವರೆಗೂ ಬರುತ್ತದೆ. ಮಳೆಗಾಲಕ್ಕೆ ನೀರು ಹಾಕಬೇಕಿಲ್ಲ. ವಾರಕ್ಕೊಂದು ಬಾರಿ ಹುಳುಗಳನ್ನು ತೆಗೆದು ಹಾಕುತ್ತಿರಬೇಕು. ಚಿಟ್ಟೆ ಮೊಟ್ಟೆಹಾಕುವ ಮೊದಲೇ ಹಿಡಿದು ಬಿಟ್ಟರೆ ಕೀಟಬಾಧೆ ಇರುವುದಿಲ್ಲ. ಬಾಳೆದಿಂಡಿಗೂ ಬರುವ ಹುಳುಗಳನ್ನು ಹಿಡಿಯಬಹುದು" ಎಂದು ಮಡಕೆಯಲ್ಲಿ ಬಿದ್ದಿರುವ ದುಂಬಿಗಳ ರಾಶಿಯನ್ನು ತೋರಿಸುತ್ತಾರೆ.
ಗೆದ್ದಲಿನ ಸಮಸ್ಯೆ ಬಗ್ಗೆ ಕೇಳಿದರೆ ಸಮುದ್ರದಲ್ಲಿ ಮೀನು,ಮಣ್ಣಿನಲ್ಲಿ ಗೆದ್ದಲು ಹುಳು ಇರಲೇಬೇಕು.ಮಣ್ಣಿನಲ್ಲಿ ಗೆದ್ದಲುಹುಳುಗಳು ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚು ಮಾಡುವುದರ ಮೂಲಕ ಹ್ಯೂಮಸ್ ನಿಮರ್ಾಣವಾಗಲು ಸಹಕಾರಿಯಾಗುತ್ತವೆ ಎನ್ನುತ್ತಾರೆ. ಒಣಗಿದ ಕಸಕಡ್ಡಿಗಳನ್ನು ಹೆಚ್ಚಾಗಿ ಹೊದಿಕೆ ಮಾಡಿದರೆ ಗೆದ್ದಲಿಗೆ ಆಹಾರ ಕೊಟ್ಟಂತಾಗುತ್ತದೆ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗೆ ಶಕ್ತಿವೇಲು ಅವರನ್ನು 9486316041 ಗೆ ಸಂಜೆ 7 ರಿಂದ 9 ಗಂಟೆಯವರೆಗೆ ಮಾತ್ರ ಕರೆಮಾಡಿ ಸಂಪಕರ್ಿಸಬಹುದು