ಕರಾವಳಿಯಿಂದ ಬಯಲು ಸೀಮೆಗೆ ಗೋಡಂಬಿ
ಗೇರು ಬೆಳೆಯತ್ತ ರೈತರ ಚಿತ್ತ , ಖುಷ್ಕಿಯಲ್ಲೂ ಖುಷಿತರಬಲ್ಲ ಬೆಳೆ

ಕಳೆದ ನಾಲ್ಕೈದು ವರ್ಷಗಳ ಸತತ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ.ತೆಂಗಿನ ತೋಟಗಳೆಲ್ಲ ಗೂಟಗಳಾಗಿವೆ.ಅಡಿಕೆ ಸಂಪೂರ್ಣ ಒಣಗಿನಿಂತಿದೆ.ಅಂತರ್ಜಲ ಕುಸಿದಿದೆ.ವಾರ್ಷಿಕ ಸರಾಸರಿ ಮಳೆಯ ಪ್ರಮಾಣದಲ್ಲಿ ( ನಮ್ಮಲ್ಲಿ ಈಗಲೂ 600 ರಿಂದ 850 ಮಿ.ಮೀ.ಮಳೆ ಇದೆ) ಅಂತಹ ವ್ಯತ್ಯಾಸವಾಗಿಲ್ಲದಿದ್ದರೂ `ನೀರು ನಿರ್ವಹಣೆ'ಯ ತಪ್ಪಿನಿಂದಾಗಿ ಬೆಳೆ ಪದ್ಧತಿ ಬದಲಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ.ಒಣ ಭೂಮಿ ತೋಟಗಾರಿಯತ್ತ ರೈತರು ಮನಸ್ಸು ಮಾಡುತ್ತಿದ್ದಾರೆ.
ಕರಾವಳಿ,ಒಳನಾಡು ಮತ್ತು ಗುಡ್ಡಗಾಡಿನಲ್ಲಿ ಬೆಳೆಯಲಾಗುತ್ತಿದ್ದ ಗೋಡಂಬಿಯನ್ನು ಈಗ ನಮ್ಮ ನೆಲದಲ್ಲೂ ಬೆಳೆಯಬಹುದು ಎನ್ನುವುದು ಸಾಬೀತಾಗಿದೆ. ಅಷ್ಟೇ ಅಲ್ಲ ಒಣ ಭೂಮಿ ಬೇಸಾಯಕ್ಕೆ ಅತ್ಯಂತ ಸೂಕ್ತವಾದ ತೋಟಗಾರಿಕೆ ಬೆಳೆಯಾಗಿದೆ. ನಮ್ಮ ಹವಾಮಾನಕ್ಕೆ ಹೊಂದಿಕೊಂಡು,ಹೆಚ್ಚು ರೋಗ ಬಾಧೆ ಇಲ್ಲದೆ ಆದಾಯ ತರಬಲ್ಲ ಬೆಳೆಯಾಗಿದೆ.25 ರಿಂದ 40 ಡಿಗ್ರಿ ಉಷ್ಣಾಂಶವನ್ನು ತಡೆದುಕೊಳ್ಳಬಲ್ಲ ಶಕ್ತಿ ಗೋಡಂಬಿ ಗಿಡಗಳಿಗಿದೆ. ಮಣ್ಣಿನ ತೇವಾಂಶ ಕಡಿಮೆಯಾದರೂ ಅಂತಹ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯಬಲ್ಲ ಗುಣ ಗೋಡಂಬಿಯದು.
ಗೋಡಂಬಿ ಬಹುಉಪಯೋಗಿ ಬೆಳೆಯಾಗಿದೆ. ಗೋಡಂಬಿಯ ತಿರುಳನ್ನು ತಿಂಡಿತಿನಿಸುಗಳಲ್ಲಿ ಹೆಚ್ಚಾಗಿ ಬಳಸಿದರೆ ಅದರ ಹಣ್ಣನ್ನು ಸಂಸ್ಕರಿಸಿ ವಿವಿಧ ಪಾನಿಯಗಳಾದ ಮದ್ಯ (ಫೆನ್ನಿ) ತಯಾರಿಕೆಯಲ್ಲಿ ಬಳಸುತ್ತಾರೆ. ಗೋಡಂಬಿ ಸಿಪ್ಪೆಕೂಡ ವಿವಿಧ ಕಾಖರ್ಾನೆಗಳಿಗೆ ಎಣ್ಣೆತಯಾರುಮಾಡಲು ಕಚ್ಛಾವಸ್ತುವಾಗಿ ಬಳಕೆಯಾಗುತ್ತಿದೆ.
ತೆಂಗು,ಬಾಳೆ,ಅರಿಶಿನ,ತರಕಾರಿಯಂತಹ ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ನಂಬಿಕೊಳ್ಳದೆ ರೈತರು ಪರಿಸ್ಥಿತಿಯ ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಯದಿದ್ದರೆ ಕೃಷಿ ಸುಖಸಂತೋಷ ನೀಡುವ, ಆದಾಯ ತರಬಲ್ಲ ಕಸುಬಾಗಿ ಉಳಿಯಲಾರದು.ಅದಕ್ಕಾಗಿ ಹೊಸ ಪ್ರಯೋಗಗಳಿಗೆ ರೈತರು ತೆರೆದುಕೊಳ್ಳಬೇಕಾಗಿದೆ.ಬೇಸಾಯದಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿಯಾಡಬೇಕಿದೆ. ಈಗಾಗಲೇ ಮಂಡ್ಯ,ಮೈಸೂರು,ತುಮಕೂರು,ಹಾಸನ,ಬೆಂಗಳೂರು ಗ್ರಾಮಾಂತರ,ರಾಮನಗರ ಮುಂತಾದ ಜಿಲ್ಲೆಗಳಲ್ಲಿ ರೈತರು ಗೋಡಂಬಿ ಕೃಷಿಮಾಡಿ ಯಶಸ್ವಿಯಾಗಿದ್ದಾರೆ.
ಪೋರ್ಚಗೀಸರು ಗೋವಾದ ಮೂಲಕ ಭಾರತಕ್ಕೆ ಗೋಡಂಬಿ ಬೇಸಾಯವನ್ನು ಪರಿಚಯಿಸಿದರು. 1960 ರ ನಂತರ ಗೋಡಂಬಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಸ್ಥಾನಪಡೆಯಿತು. ನೀರು ಮತ್ತು ಮಣ್ಣಿನ ಸಂರಕ್ಷಣೆಗೆ ಆರಂಭದಲ್ಲಿ ಗೇರು ಬೆಳೆಯಲಾಗುತ್ತಿತ್ತು.
ಮಣ್ಣು ಸಮದ್ರ ಸೇರುವುದನ್ನು ತಡೆಯಲು ಕರಾವಳಿ ಪ್ರದೇಶಕ್ಕೆ ಬಂದ ಗೋಡಂಬಿ ಬೆಳೆ ಈಗ ಬಹುವಾಷರ್ಿಕ ವಾಣಿಜ್ಯ ಬೆಳೆಯಾಗಿ ಬಯಲು ಪ್ರದೇಶಕ್ಕೂ ಬಂದಿದೆ. ಮಹಾರಾಷ್ಟ್ರ, ಗೋವಾ, ಒರಿಸ್ಸಾ, ಕೇರಳ,ಆಂಧ್ರ,ಕನರ್ಾಕಟಕದ ರೈತರು ಈಗ ಗೋಡಂಬಿ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಕಳೆದ ಶತಮಾನದವರೆಗೂ ರೈತರಿಗೆ ಗೋಡಂಬಿ ಬೆಳೆಯ ಮಹತ್ವ ಗೊತ್ತಿರಲಿಲ್ಲ. ಪ್ರತಿ ಕೆಜಿ ಕಚ್ಚಾ ಗೋಡಂಬಿಗೆ 250 ರೂಪಾಯಿ ದಾಟಿದ ಮೇಲೆ ರೈತರು ಗೋಡಂಬಿಯತ್ತ ನೋಡತೊಡಗಿದ್ದಾರೆ.
2014-15 ರಲ್ಲಿ ನಮ್ಮ ದೇಶಕ್ಕೆ 6000 ಕೋಟಿ ರೂಪಾಯಿ ಹೆಚ್ಚಿನ ವಿದೇಶಿ ವಿನಿಮಯ ಗೋಡಂಬಿಯಿಂದ ಬಂದಿದೆ. ಈಗ ನಮ್ಮಲ್ಲಿ ಇದರ ಉತ್ಪಾದನೆ ಪ್ರಮಾಣ 7 ಲಕ್ಷ ಟನ್ ಇದ್ದು,ಬೇಕಾಗಿರುವ ಕಚ್ಚಾ ಗೇರು ಬೀಜದ ಪ್ರಮಾಣ 17 ಲಕ್ಷ ಟನ್ಗಳಷ್ಟಿದೆ. ಆಗಾಗಿ ಈ ಬೆಳೆಯ ಪ್ರದೇಶ ವಿಸ್ತರಣೆ,ಉತ್ಪಾದನೆ ಹೆಚ್ಚಿಸಲು ಸಕರ್ಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಮುಂದಾಗಿದೆ. ಮೈಸೂರು,ಚಾಮರಾಜನಗರ ತೋಟಗಾರಿಕೆ ಇಲಾಖೆಗೆ ಎರಡು ಜಿಲ್ಲೆಗಳಲ್ಲಿ ಗೋಡಂಬಿ ಕೃಷಿ ವಿಸ್ತರಣೆಗೆ ಈ ಸಾಲಿಗೆ ಗುರಿ ನಿಗಧಿಮಾಡಲಾಗಿದೆ. ಸಹಾಯಧನವನ್ನು ನೀಡಲಾಗುತ್ತಿದೆ.
ಒಣ ಬೇಸಾಯಕ್ಕೆ ಸೂಕ್ತ : ಇದೊಂದು ಅಸಾಂಪ್ರದಾಯಿಕ ಬೆಳೆ. ಒಣ ಬೇಸಾಯದ ರೈತರ ಆದಾಯದಲ್ಲಿ ಸ್ಥಿರತೆ ಇಲ್ಲ. ಅಕಾಲಿಕ ಮಳೆಯಿಂದಾಗಿ ರೈತರು ಮಾರುಕಟ್ಟೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬೇಸಾಯ ಮಾಡಬೇಕಾಗುತ್ತದೆ.ದೀರ್ಘಕಾಲದ ಆಪತ್ತು ನಿರ್ವಹಣೆಗೆ ಗೇರು ಜಾಣತನದ ಆಯ್ಕೆ ಎನ್ನುವುದನ್ನು ಈಗಾಗಲೇ ಕೋಲಾರ,ಮಂಡ್ಯ ಜಿಲ್ಲೆಯಲ್ಲಿ ರೈತರು ಕಂಡುಕೊಂಡಿದ್ದಾರೆ.

ಮೊದಲ ಎರಡು ವರ್ಷ ಗಿಡಗಳನ್ನು ನೀರುಕೊಟ್ಟು ಬೆಳೆಸಿದರೆ ನಂತರ ಸರಿಯಾದ ನಿರ್ವಹಣೆ ಮಾಡಿಕೊಂಡರೆ ಮಳೆಯಾಶ್ರಯದಲ್ಲೆ ಗೋಡಂಬಿಯನ್ನು ಬೆಳೆಯಬಹುದು ಎನ್ನುವುದು ರೈತರ ಅನುಭವ.
ಪ್ರಯೋಗಶೀಲ ರೈತರ ಕೊರತೆ : ಮೈಸೂರು ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಇತ್ತೀಚಿಗೆ ಗೋಡಂಬಿ ಬೆಳೆ ಕುರಿತು ನಡೆದ ಕಾಯರ್ಾಗಾರಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಎಚ್.ಕ್ರಾಸ್ ಬಳಿಯ ಕಾಳಿನಾಯಕನಹಳ್ಳಿಯ ರೈತ ನಾಗರಾಜು ಅವರನ್ನು ಮಾತನಾಡಿಸಿದಾಗ, ಈ ಭಾಗದಲ್ಲೂ ಗೋಡಂಬಿಯನ್ನು ಬೆಳೆಯಬಹುದು.ಆದರೆ ಇಲ್ಲಿನ ರೈತರು ಇನ್ನೂ ಹದಿನೈದು ಇಪ್ಪತ್ತು ವರ್ಷ ಹಿಂದೆಯೇ ಇದ್ದಾರೆ ಎನ್ನುತ್ತಾರೆ.
ಕಳೆದ 8 ವರ್ಷಗಳಿಂದ ಗೋಡಂಬಿ ಕೃಷಿಕರಾಗಿರುವ ನಾಗರಾಜು ನಾಲ್ಕು ಎಕರೆ ಪ್ರದೇಶದಲ್ಲಿ 180 ಗಿಡಗಳನ್ನು ಹಾಕಿದ್ದು,ಈಗ ಅವರು ಅದರಿಂದ ವಾಷರ್ಿಕ ಐದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದಕ್ಕೂ ಮುಂಚೆ ಅಪ್ಪ ಹಾಕಿಸಿದ್ದ ಮಾವಿನ ಮರಗಳು ವಾಷರ್ಿಕ 20 ಸಾವಿರ ರೂಪಾಯಿ ಆದಾಯವನ್ನು ತರುತ್ತಿದ್ದವು. ಆಗ ನಾಗರಾಜು ಆಲೋಚನೆಮಾಡಿ ಅವರದೇ ತಾಲೂಕಿನ ಕೆಲ ಗೋಡಂಬಿ ತೋಟಗಳಿಗೆ ಭೇಟಿ ನೀಡಿ ಬೇಸಾಯದ ಬಗ್ಗೆ ತಿಳಿದುಕೊಂಡು ಒಂದು ತೀಮರ್ಾನಕ್ಕೆ ಬಂದರು.
ಮಾವಿನ ಮರಗಳನ್ನೆಲ್ಲ ಬುಡಸಮೇತ ತೆಗೆಸಿ 4 ಎಕರೆ ಜಮೀನಿನಲ್ಲಿ ಉಲ್ಲಾಳ 1 ತಳಿಯ 180 ಗೇರು ಗಿಡಗಳನ್ನು ನೆಟ್ಟರು. ನೀರಿನ ಸಮಸ್ಯೆ ಇರುವವರು ಎಕರೆಗೆ 40 ಗಿಡಗಳ ಮೇಲೆ ಹಾಕಬಾರದು ಎನ್ನುವ ನಾಗರಾಜು. ನಮ್ಮಂತಹ ಬಯಲು ಸೀಮೆಯ ರೈತರು ಹೈಡೆನ್ಸಿಟಿ ಮಾದರಿಯಲ್ಲಿ ಗಿಡಗಳನ್ನು ಹಾಕಬಾರದು ಎನ್ನುತ್ತಾರೆ.
ನಾಗರಾಜು ಅವರ ಜಮೀನಿನ ಸುತ್ತ ಸಾವಿರ ಅಡಿ ಬೋರಿಕೊರೆಸಿದರು ನೀರಿಲ್ಲ.ಅದಕ್ಕೆ ಅವರು ಕಂಡುಕೊಂಡ ಉಪಾಯ ನೀರಿಗಾಗಿ ಬೋರು ಕೊರೆಸಲೇ ಬಾರದು. ನಾಲ್ಕು ಕಿ.ಮೀ.ದೂರದ ತಮ್ಮದೇ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ಟ್ಯಾಂಕರ್ನಲ್ಲಿ ಗಿಡಗಳಿಗೆ ನೀರು ತಂದು ಹಾಕಿದರು.
"ಮಳೆ ಸರಿಯಾಗಿ ಆದ್ರೆ ಗೋಡಂಬಿಗೆ ನೀರೆ ಬೇಡ.ಎಂಟು ವರ್ಷದಲ್ಲಿ ನಮಗೆ ಆರು ವರ್ಷ ಬರ ಇತ್ತು.ಉಳಿದೆರಡು ವರ್ಷ ಮಾತ್ರ ಮಳೆ ಆಯಿತು.ಆಗ ನೀರು ಕೊಡಲೇ ಇಲ್ಲ". ವಾರ್ಷಿಕ 400 ರಿಂದ 600 ಮಿ.ಮೀ.ಮಳೆಯಾಗುವ ಕಡೆ ಮಳೆಯಾಶ್ರಯದಲ್ಲೇ ಗೋಡಂಬಿ ಬೆಳೆಬಹುದು ಎನ್ನುವುದು ನಾಗರಾಜು ಅವರ ಅನುಭವದ ಮಾತು.
ಗೋಡಂಬಿ ಗಿಡ ಹೂ ಬಿಟ್ಟ ಮೇಲೆ ಹದಿನೈದು ದಿನಕ್ಕೊಮ್ಮೆ ನೀರು ಕೊಡಬೇಕು.ಮಾಚರ್್ ನಿಂದ ಮೇ ವರೆಗೆ ಕಟಾವು ಮುಗಿಯುತ್ತದೆ. ಕೃಷಿಹೊಂಡ ಇದ್ದರಂತೂ ಇದರ ಬೇಸಾಯ ಮತ್ತು ನಿರ್ವಹಣೆ ಸುಲಭ ಎನ್ನುತ್ತಾರೆ.
ಮೈದಾನ ಪ್ರದೇಶದಲ್ಲಿ ಗೋಡಂಬಿ ಬೆಳೆದರೆ ಕೀಟಬಾಧೆ ಕಡಿಮೆ. ನಾಟಿ ಮಾಡಿದ ಮೂರನೇ ವರ್ಷದಿಂದ ಪ್ರತಿಗಿಡದಿಂದ ಒಂದು ಕಿಜಿ ಬಂದರೆ ನಂತರ ಪ್ರತಿವರ್ಷ ಇಳುವರಿ ಹೆಚ್ಚಳವಾಗುತ್ತಾ ಹೋಗುತ್ತದೆ. ಈ ಬಾರಿ ತಮಗೆ 180 ಗಿಡಗಳಿಂದ ಸಿಕ್ಕ ಉತ್ಪನ್ನ 38 ಕ್ವಿಂಟಾಲ್. ಬಂದ ಆದಾಯ ಐದು ಲಕ್ಷದ ಎಪ್ಪತ್ತು ಸಾವಿರ. ಖಚರ್ು ಕಳೆದು ಉಳಿದ ನಿವ್ವಳ ಆದಾಯ ಐದು ಲಕ್ಷ ರೂಪಾಯಿ. ಅದೇ ಪಕ್ಕದಲ್ಲೇ ಇರುವ ತಮ್ಮ ಅಣ್ಣ ನಾಲ್ಕು ಎಕರೆ ಪ್ರದೇಶದಲ್ಲಿರುವ ಮಾವಿನಿಂದ 60 ಸಾವಿರ ಆದಾಯಗಳಿಸಿದ ಎಂದು ಲೆಕ್ಕ ನೀಡುತ್ತಾರೆ ನಾಗರಾಜು.

ತಮ್ಮ ಸುತ್ತಮತ್ತಲಿನ ರೈತರಿಗೆ ಗೋಡಂಬಿ ಬೆಳೆಯಲು ಪ್ರೋತ್ಸಾಹನೀಡುವುದಲ್ಲದೆ ಅವರಿಗೆ ಬೇಕಾದ ಉತ್ತಮ ತಳಿಯ ಗೋಡಂಬಿ ಗಿಡಗಳನ್ನು ನಾಗರಾಜು ತರಿಸಿಕೊಡುವ ಮೂಲಕ ರೈತರಿಗೂ ನೆರವಾಗುತ್ತಿದ್ದಾರೆ.
ಮುಂದಿನ ಹದಿನೈದು ವರ್ಷಕ್ಕೆ ಏನಾಗುತ್ತದೆ ಎಂಬ ಯೋಚನೆ ಬಿಟ್ಟು ರೈತರು ಗೋಡಂಬಿ ಬೆಳೆಯಲು ಮುಂದಾಗಬೇಕು.ಈ ಭೂಮಿ ನಮ್ಮದಲ್ಲ.ನಾವ್ಯಾರು ಇಲ್ಲಿ ಶಾಶ್ವತವಾಗಿ ಇಲ್ಲೇ ಇರಲು ಬಂದವರಲ್ಲ.ಇರುವವರೆಗೆ ನೆಮ್ಮದಿಯಾಗಿ ಇದ್ದು ಹೊರಟುಬಿಡಬೇಕು. ಇಲ್ಲಸಲ್ಲದ್ದನ್ನು ಯೋಚನೆ ಮಾಡುವುದನ್ನು ಬಿಟ್ಟು ಗೋಡಂಬಿ ಬೇಸಾಯಕ್ಕೆ ರೈತರು ಮುಂದಾಗಬೇಕು. ಇನ್ನೂ ಇಪ್ಪತ್ತು ಮೂವತ್ತು ವರ್ಷ ಗೋಡಂಬಿ ಬೆಳೆಗೆ ಉತ್ತಮ ದರ ಇರುತ್ತದೆ. ಅದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಮಾತು ಸೇರಿಸುತ್ತಾರೆ.
ಮಂಡ್ಯ ಜಿಲ್ಲೆಯಲ್ಲೂ ಈಗಾಗಲೇ ನಿವೃತ್ತ ಅರಣ್ಯಧಿಕಾರಿ ಅಣ್ಣಯ್ಯ ಅವರು ಕೃಷಿ ವಿಜ್ಞಾನ ಪದವಿಧರ ಸಂಘದ ಮೂಲಕ ಗೋಡಂಬಿ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಂಡ್ಯಜಿಲ್ಲೆಯ ಗೆಜ್ಜಲಗೆರೆ ಸೇರಿದಂತೆ ಐನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈಗಾಗಲೇ ಗೋಡಂಬಿ ಗಿಡಗಳನ್ನು ಮಹಾರಾಷ್ಟ್ರದ ವೆಂಗೂರ್ಲಾದಿಂದಲೇ ತರಿಸಿ ನಾಟಿಮಾಡಿಸಲಾಗಿದೆ. ಮೈಸೂರು-ಚಾಮರಾಜನಗರ ಜಿಲ್ಲೆಯ ರೈತರು ಗೋಡಂಬಿ ಬೆಳೆಯಲು ಮುಂದಾಗಿದ್ದಾರೆ. ಗುಂಡ್ಲುಪೇಟೆಯ ಸಮನಾಸಕ್ತ ಕೃಷಿಕರ ಬಳಗದ ಸದಸ್ಯರು ಗೋಡಂಬಿ ಬೇಸಾಯದತ್ತ ಮುಖಮಾಡಿದ್ದಾರೆ.ಕಡಿಮೆ ನೀರು,ರೋಗಬಾಧೆ ಹೆಚ್ಚಿಲ್ಲದ, ಕಡಿಮೆ ನಿರ್ವಹಣೆಬೇಡುವ,ಕೌಶಲ್ಯಭರಿತ ಕಾಮರ್ಿಕರನ್ನು ಕೇಳದ ಗೋಡಂಬಿ ಬೆಳೆಯುವ ರೈತರು ತಮ್ಮ ಸಮೀಪದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪಕರ್ಿಸಬಹುದು. ಹೆಬ್ಬಾಳದಲ್ಲಿರುವ ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲಾ ಮಾದರಿಯ ಗೋಡಂಬಿ ಬೇಸಾಯದ ತೋಟಗಳನ್ನು ನೋಡಬಹುದು. ಖುಷ್ಕಿ ಬೇಸಾಯದಲ್ಲೂ ಖುಷಿ ತರುವ ಗೋಡಂಬಿ ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಪ್ರಯೋಗಶೀಲ ರೈತ ನಾಗರಾಜು ಅವರನ್ನು ರಾತ್ರಿ 7 ರಿಂದ 9 ಗಂಟೆಯವರೆಗೆ 7026531847 ಸಂಪರ್ಕಿಸಿ.