ಬೆಳಕಿನ ಬೇಸಾಯದ ಕಡೆಗೆ ಮೊದಲ ಹೆಜ್ಜೆ...
ಹದಿನೈದು ತಿಂಗಳಲ್ಲಿ ಆರು ಕೋಟಿ ಆದಾಯ...!.ಹಾಗಂತ ನಾನು ಫೇಸ್ ಬುಕ್ ನಲ್ಲಿ ಬರೆದಾಗ ಆ ಸುದ್ದಿಯನ್ನು ನೂರಕ್ಕೂ ಹೆಚ್ಚು ಗೆಳೆಯರು ಶೇರ್ ಮಾಡಿಕೊಂಡರು. ಸಾವಿರಾರು ಜನ ಓದಿ ಹುಬ್ಬೆರಿಸಿದರು. ಆಗ ನನಗನಿಸಿದ್ದು ಈ ಸುದ್ದಿಗೆ ಇಷ್ಟೊಂದು ಪ್ರಾಮುಖ್ಯತೆ ಇದೆಯಾ ?. ಹಾಗಾದರೆ ವಿವರವಾಗಿ ಬರೆದುಬಿಡೋಣ ಎಂದು ಕುಳಿತೆ. ಪ್ರತಿವಾರ ಸಣ್ಣ ಸಣ್ಣ ಸಂಗತಿಗಳೊಂದಿಗೆ ಮುಖಾಮುಖಿಯಾಗೋಣ. ನಾನು ಬರೆದಿರುವುದೆ ಅಂತಿಮ ಸತ್ಯ ಅಲ್ಲ. ನಿಮ್ಮಗೂ ಕೃಷಿಯಲ್ಲಿ ವಿಭಿನ್ನ ಅನುಭವಗಳಾಗಿರಬಹುದು. ಹಂಚಿಕೊಳ್ಳಿ.
ಇದು ಗ್ರೂಫ್ ಪಾರ್ಮಿಂಗ್. ಗುಂಪು ಬೇಸಾಯ. ಹೀಗೆ ಮಾಡುವುದರಿಂದ ಎಷ್ಟು ಲಾಭ ಎನ್ನುವುದಕ್ಕೆ ನಾವು ಕಂಡ ಮಾದರಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
ಹದಿನೈದು ತಿಂಗಳಲ್ಲಿ ಬಾಳೆ ಬಾಳೆದು ಆರು ಕೋಟಿ ಮೂವತ್ತೆಂಟು ಲಕ್ಷ ರೂಪಾಯಿ ಆದಾಯಗಳಿಸಿದ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸುತ್ತಲಿನ ಗ್ರಾಮದ ರೈತರು. ಹೌದು. ಆಶ್ಚರ್ಯವಾಗುತ್ತಿರಬಹುದು. ಆದರೂ ಇದು ನಿಜ. ಒಂದು, ಎರಡು ಎಕರೆ ಜಮೀನು ಇರುವ ಸಣ್ಣ ಸಣ್ಣ ರೈತರ ಗುಂಪುಮಾಡಿ 25 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಸಿಗಳಿಸಿದ ಆದಾಯ ಇದು.ಇದರ ಹಿಂದಿನ ವ್ಯಕ್ತಿ ಮತ್ತು ಶಕ್ತಿ ಒರ್ವ ಯುವ ಕೃಷಿಕ.
ಹೊಸವೀಡು ಗ್ರಾಮದ ಎಚ್.ಎಂ. ಮಲ್ಲಿಕಾರ್ಜನಪ್ಪ ಮತ್ತು ಸುಶೀಲಮ್ಮ ದಂಪತಿಯ ಪುತ್ರ ಪ್ರಶಾಂತ್ ಓದಿದ್ದು ಎಂ.ಎ,ಅರ್ಥಶಾಸ್ತ್ರ.ಆದರೆ ಕೈಹಿಡಿದಿದ್ದು ಕೃಷಿ. ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ ಎಂದು ಎಲ್ಲರೂ ಚಚರ್ೆಮಾಡುವ ಕಾಲಕ್ಕೆ ಉನ್ನತ ಶಿಕ್ಷಣ ಮುಗಿಸಿದ ಪ್ರಶಾಂತ್ ಹಳ್ಳಿಯ ದಿಕ್ಕಿಗೆ ಮುಖಮಾಡಿದ್ದ.ಈಗ ಅವನೊಬ್ಬ ಯಶಸ್ವಿ ಕೃಷಿಕ. ಮಾರ್ಗದರ್ಶಕ.ಮಾದರಿ ರೈತ. ನಿಜ ಅರ್ಥದಲ್ಲಿ ಬಂಗಾರದ ಮನುಷ್ಯ. ಪ್ರಶಾಂತ ಕೃಷಿಗೆ ಪತ್ನಿ ತೇಜಸ್ವಿನಿ ಸಾಥ್ ನೀಡುವ ಮೂಲಕ ರೈತ ಸಮುದಾಯದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ.
ಗ್ರಾಮೀಣ ಆಥರ್ಿಕತೆಯನ್ನು ಸದೃಢಮಾಡಬೇಕು. ರೈತರು ಸಬ್ಸಿಡಿಗಾಗಿ ಭಿಕ್ಷಾಪಾತ್ರೆ ಹಿಡಿದು ನಿಲ್ಲಬಾರದು.ಸ್ವಾಭಿಮಾನ, ಆತ್ಮ ವಿಶ್ವಾಸದಿಂದ ತಲೆ ಎತ್ತಿ ನಡೆಯುವಂತಾಗಬೇಕು.ರೈತ ಮಕ್ಕಳಿಗೆ ಗೌರವತರುವಂತೆ ಬದುಕು ಕಟ್ಟಿಕೊಳ್ಳಲು ಏನಾದರೊಂದು ಮಾಡಲೇ ಬೇಕು ಎಂಬ ಅಚಲ ನಿಧರ್ಾರ ಮಾಡಿ ಊರಿಗೆ ಹೋದ ತರುಣ ಪ್ರಶಾಂತ್.
"ತಾನು ಅಂದುಕೊಂಡದ್ದನ್ನು ಸಾಧಿಸಿದ ತೃಪ್ತಿ ಇದೆ. ಕೃಷಿಯಲ್ಲೂ ಹಣವಿದೆ ಎನ್ನುವುದನ್ನು ತೋರಿಸಿ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಿದ ಸಮಾಧಾನವಿದೆ.ಆದರೂ ತಾನು ಸಾಧಿಸಿದ್ದು ಏನೇನು ಅಲ್ಲಾ.ನಮ್ಮ ಉದ್ದೇಶ ಮತ್ತು ಗುರಿ ತುಂಬಾ ದೊಡ್ಡದಿದೆ. ನಾವು ಅಂದುಕೊಂಡದ್ದು ಆದರೆ ಇದೆ ವರ್ಷ ನೂರ ಇಪ್ಪತ್ತು ಎಕರೆಯಲ್ಲಿ ಪರಸ್ಪರ ಸಹಕಾರ ತತ್ವದಡಿ( ಕ್ರೌಡಿಂಗ್ ಫಂಡ್) ಕೃಷಿಮಾಡಿ ತೋರಿಸುತ್ತೇವೆ" ಎಂದು ಪ್ರಶಾಂತ್ ತುಂಬು ಆತ್ಮವಿಶ್ವಾಸದಿಂದ ನುಡಿಯುತ್ತಾರೆ. ಮೈಸೂರು ಜಿಲ್ಲೆಯಲ್ಲೆ ತನ್ನ ಹೊಸ ಪ್ರಾಜೆಕ್ಟ್ನ ಕಲ್ಪನೆ ಸಾಕಾರವಾಗುತಿದ್ದು ಅದೆಲ್ಲಾ ಒಂದು ಹಂತಕ್ಕೆ ಬಂದ ನಂತರ ವಿವರವಾಗಿ ತಿಳಿಸುವುದಾಗಿ ಹೇಳುತ್ತಾರೆ.
ನಿಮಗೆ ನೆನಪಿರಲ್ಲಿ ಅವರಲ್ಲಿ ಅನಕ್ಷರಸ್ಥರು, ಉನ್ನತ ವ್ಯಾಸಂಗ ಮಾಡಿದವರು, ಸಾಫ್ಟ್ವೇರ್ ಎಂಜಿನಿಯರ್ಗಳು ಹೀಗೆ ಎಲ್ಲರೂ ಇದ್ದರು. ನಾವೆಲ್ಲಾ ನಗರದಲ್ಲಿ ಕುಳಿತು ಕೃಷಿಲಾಭದಾಯಕ ಉದ್ಯೋಗವಲ್ಲ ಎಂದು ಮಾತನಾಡುವ ಹೊತ್ತಿಗೆ ಅವರೆಲ್ಲಾ ತೋಟದಲ್ಲಿ ನಿಂತು ದುಡಿಯುತ್ತಿದ್ದರು. ಒತ್ತಡರಹಿತ, ಆರೋಗ್ಯಕರ ಬದುಕು ಕಟ್ಟಿ ಕೊಂಡಿದ್ದರು. ಹಸಿರು ವನಸಿರಿಯ ನಡುವೆ ತಮಗೆ ಇಷ್ಟದ ಕೆಲಸಮಾಡುತ್ತಾ ನಗು ನಗುತಾ ಕೃಷಿಯಲ್ಲಿ, ಖುಶಿಯಲ್ಲಿ ಇದ್ದರು.
ಇಂತಹ ಮೂವತ್ತೈದಕ್ಕೂ ಹೆಚ್ಚು ಕೃಷಿ ಮಾದರಿಗಳನ್ನು ಪ್ರತಿವಾರ "ಆಂದೋಲನ" ದಿನ ಪತ್ರಿಕೆಯ ಬಂಗಾರದ ಮನುಷ್ಯರು ಎಂಬ ಅಂಕಣದ ಮೂಲಕ ನಾನು ನಿಮ್ಮ ಮುಂದೆ ಸವಿಸ್ತಾರವಾಗಿ ಹೇಳುತ್ತಾ ಬಂದೆ. ಕಾಯಕ ಜೀವಿಗಳ ತೀರಿಸಲಾಗದಷ್ಟು ಶ್ರಮದ ಋಣ ನಮ್ಮ ಮೇಲಿದೆ ಅಂತ ತಿಳಿದುಕೊಂಡಿರುವವನು ನಾನು. ಅಂತಹ ತೀರಿಸಲಾಗದ ಋಣದ ಭಾರವನ್ನು ತುಸು ಕಡಿಮೆ ಮಾಡಿಕೊಳ್ಳುವ ಆಸೆಯಿಂದ ಮಣ್ಣಿನ ಮಕ್ಕಳ ಯಶೋಗಾಥೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಬಂದೆ.
ಫಾರ್ ಎ ಚೇಂಜ್ ಹೊಸ ವರ್ಷದ ಹೊಸ ನಿರ್ಣಯವೊಂದನ್ನು ಮಾಡಿರುವೆ. ಈ ಸಲ ಮಾದರಿ ರೈತರ ಕೃಷಿ ಅನುಭವಗಳನ್ನು ಸಮಾನಾಸಕ್ತ ಫೇಸ್ಬುಕ್ ಗೆಳೆಯರ ಜೊತೆ ಹಚ್ಚಿಕೊಳ್ಳಲು ನಿರ್ಧರಿಸಿದ್ದೇನೆ.2017 ಸಂಪೂರ್ಣ ಕೃಷಿ ವರ್ಷ.ಕುಂತರೂ ನಿಂತರೂ ಕೃಷಿಯನ್ನೇ ಧ್ಯಾನ ಮಾಡಲು ನಿರ್ಣಯಿಸಿದ್ದೇನೆ. ಇದು ಹೊಸವರ್ಷದ ಒಂದೇ ನಿರ್ಣಯ. ಇದರ ಭಾಗವಾಗಿ ತುಂಬಾ ಇಷ್ಟವಾದ ರೈತರ ಕೃಷಿ ಅನುಭವಗಳನ್ನು ಬಿಡುವಾದಗಲೆಲ್ಲಾ ಚಿಕ್ಕ ಚಿಕ್ಕ ಕಂತುಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಇದರಿಂದ ನಿಮಗೆ ಎಷ್ಟು ಸಹಾಯವಾಗುವುದೋ ಗೊತ್ತಿಲ್ಲಾ. ಆದರೆ ಪ್ರಶಾಂತ್ನಂತಹ ಹತ್ತು ಮಂದಿ ಯುವಕರಾದರೂ ಹಳ್ಳಿಗಳಲ್ಲಿ ಹುಟ್ಟಿಕೊಳ್ಳುತ್ತಾರೆ. ಕುಸಿಯುತ್ತಿರುವ ಕೃಷಿಗೆ ಹೆಗಲು ಕೊಡುತ್ತಾರೆ ಎಂಬ ಆಶಾಭಾವನೆ ಇದೆ. "ಬಿದಿರು ಬೇಸಾಯ ಬಳಗ" ದ ಹೊಸ ಕಲ್ಪನೆ ಇದು. ರೈತ ಅರಿವು ಸರಣಿ ಆರಂಭವಾಗುತ್ತಿದೆ. ನಿಮ್ಮ ಸಲಹೆ, ಮಾರ್ಗದರ್ಶನ ಇರಲಿ. ಸಂವಾದ ಇದ್ದರೆ ಮತ್ತಷ್ಟೂ ಅರ್ಥಪೂರ್ಣ. ಮೊದಲ ಕಂತಿನಲ್ಲಿ ಪ್ರಶಾಂತನ ಕೃಷಿಯ ಬಗ್ಗೆ ಹೇಳುತ್ತೇನೆ.ಕೇಳಿಸಿಕೊಳ್ಳಲು ನೀವು ಸಿದ್ಧವಿದ್ದೀರಿ ತಾನೆ.
ಹಾಗಾದರೆ ಕೇಳಿ... ರೈತನ ಸಂಕಷ್ಟಕ್ಕೆ ಯಾರು ಹೊಣೆ? ಬನ್ನಿ ಹುಡುಕೋಣ........
Super job you are doing sir,really it's honorable work and all the best.
ಪ್ರತ್ಯುತ್ತರಅಳಿಸಿSuper job you are doing sir,really it's honorable work and all the best.
ಪ್ರತ್ಯುತ್ತರಅಳಿಸಿ